Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಒಬ್ಬ ಹುಚ್ಚು ಮುಖ್ಯಮಂತ್ರಿ: ಗೃಹಸಚಿವ ಶಿಂಧೆ ಆರೋಪ

ಕೇಜ್ರಿವಾಲ್ ಒಬ್ಬ ಹುಚ್ಚು ಮುಖ್ಯಮಂತ್ರಿ: ಗೃಹಸಚಿವ ಶಿಂಧೆ ಆರೋಪ
, ಬುಧವಾರ, 22 ಜನವರಿ 2014 (17:08 IST)
PR
PR
ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಒಬ್ಬರು ಹುಚ್ಚು ಮುಖ್ಯಮಂತ್ರಿ ಎಂದು ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಕೇಜ್ರಿವಾಲ್ ಹುಚ್ಚಾಟದಿಂದ ದೆಹಲಿಯ ಪೊಲೀಸರಿಗೆ ನೀಡಿದ್ದ ರಜೆಗಳನ್ನು ರದ್ದು ಮಾಡಿ ಧರಣಿ ನಿರತ ಸ್ಥಳದಲ್ಲಿ ನಿಯೋಜಿಸಲಾಯಿತು ಎಂದು ಶಿಂಧೆ ಹೇಳಿದ್ದಾರೆ.

ರೈಲ್ವೆ ಭವನದ ಎದುರು ಕೇಜ್ರಿವಾಲ್ ತಮ್ಮ ಕಾರ್ಯಕರ್ತರನ್ನು ಸೇರಿಸಿ ಸಂಚಾರಕ್ಕೆ ತೊಂದರೆ ಮಾಡುವ ಮೂಲಕ ಹುಚ್ಚಾಟ ನಡೆಸಿದ್ದಾರೆ ಎಂದು ಶಿಂಧೆ ಆರೋಪಿಸಿದರು. ದೆಹಲಿಯ ಐವರು ಪೊಲೀಸರನ್ನು ವಜಾ ಮಾಡಬೇಕೆಂದು ಪಟ್ಟು ಹಿಡಿದು ಕೇಜ್ರಿವಾಲ್ ಧರಣಿ ನಡೆಸಿದ್ದರಿಂದ ದೆಹಲಿಯ ಮೆಟ್ರೋ ಸಂಚಾರ ಅಸ್ತವ್ಯಸ್ತವಾಗಿತ್ತು.

Share this Story:

Follow Webdunia kannada