Webdunia - Bharat's app for daily news and videos

Install App

ಕೆಟ್ಟ ಊಟ ನೀಡಿದ್ದಕ್ಕಾಗಿ ಪತ್ನಿಯ ರುಂಡವನ್ನು ಕತ್ತರಿಸಿದ ಪತಿ ಮಹಾಶಯ

Webdunia
ಬುಧವಾರ, 18 ಸೆಪ್ಟಂಬರ್ 2013 (12:51 IST)
WD
ರುಚಿಕರವಾದ ಆಹಾರ ಬಡಿಸಲು ಒಪ್ಪದ ಪತ್ನಿಯ ರುಂಡವನ್ನು ಕತ್ತರಿಸಿ ರುಂಡದೊಂದಿಗೆ ಗ್ರಾಮವನ್ನು ಒಂದು ಸುತ್ತು ಹಾಕಿ, ಮನೆಗೆ ಬಂದು ಊಟ ಮಾಡಿದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಅನೈತಿಕ ಸಂಬಂಧ ಮತ್ತು ಆಕೆಯ ಸ್ವಾದಿಷ್ಠಕರವಲ್ಲದ ಆಹಾರ ನೀಡುತ್ತರುವುದರಿಂದ ಬೇಸತ್ತು ಆಕೆಯನ್ನು ಹತ್ಯೆ ಮಾಡಿರುವುದಾಗಿ ಜುಲ್ಹಾನ್‌ಪುರವಾ ಗ್ರಾಮದ ನಿವಾಸಿಯಾದ ಪತಿ ಶರೀಷ್ ತನ್ನ ಪತ್ನಿ ರಹಮಾತುಲ್ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಶರೀಪ್ ಊಟ ಮಾಡುತ್ತಿರುವಾಗ ರೊಟ್ಟಿಯಲ್ಲಿ ಚಿಕ್ಕ ಪ್ರಮಾಣದ ಕಲ್ಲೊಂದು ಪತ್ತೆಯಾಗಿದ್ದರಿಂದ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.ಪತ್ನಿ ರಹಮಾತುಲ್ ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಾಗ ತಾಳ್ಮೆಯನ್ನು ಕಳೆದುಕೊಂಡ ಪತಿ ಹರಿತವಾದ ಆಯುಧದಿಂದ ಆಕೆಯ ರುಂಡವನ್ನು ಕತ್ತರಿಸಿಹಾಕಿದ್ದಾನೆ.

ಕಳೆದ ಎರಡು ವರ್ಷಗಳಿಂದ ಪತಿ ಶರೀಷ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಎಂದು ಗ್ರಾಮಸ್ಥರು ದೆಹಾಟ್ ಕೋತ್ವಾಲಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments