ರುಚಿಕರವಾದ ಆಹಾರ ಬಡಿಸಲು ಒಪ್ಪದ ಪತ್ನಿಯ ರುಂಡವನ್ನು ಕತ್ತರಿಸಿ ರುಂಡದೊಂದಿಗೆ ಗ್ರಾಮವನ್ನು ಒಂದು ಸುತ್ತು ಹಾಕಿ, ಮನೆಗೆ ಬಂದು ಊಟ ಮಾಡಿದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಅನೈತಿಕ ಸಂಬಂಧ ಮತ್ತು ಆಕೆಯ ಸ್ವಾದಿಷ್ಠಕರವಲ್ಲದ ಆಹಾರ ನೀಡುತ್ತರುವುದರಿಂದ ಬೇಸತ್ತು ಆಕೆಯನ್ನು ಹತ್ಯೆ ಮಾಡಿರುವುದಾಗಿ ಜುಲ್ಹಾನ್ಪುರವಾ ಗ್ರಾಮದ ನಿವಾಸಿಯಾದ ಪತಿ ಶರೀಷ್ ತನ್ನ ಪತ್ನಿ ರಹಮಾತುಲ್ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಶರೀಪ್ ಊಟ ಮಾಡುತ್ತಿರುವಾಗ ರೊಟ್ಟಿಯಲ್ಲಿ ಚಿಕ್ಕ ಪ್ರಮಾಣದ ಕಲ್ಲೊಂದು ಪತ್ತೆಯಾಗಿದ್ದರಿಂದ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.ಪತ್ನಿ ರಹಮಾತುಲ್ ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಾಗ ತಾಳ್ಮೆಯನ್ನು ಕಳೆದುಕೊಂಡ ಪತಿ ಹರಿತವಾದ ಆಯುಧದಿಂದ ಆಕೆಯ ರುಂಡವನ್ನು ಕತ್ತರಿಸಿಹಾಕಿದ್ದಾನೆ.
ಕಳೆದ ಎರಡು ವರ್ಷಗಳಿಂದ ಪತಿ ಶರೀಷ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಎಂದು ಗ್ರಾಮಸ್ಥರು ದೆಹಾಟ್ ಕೋತ್ವಾಲಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.