Webdunia - Bharat's app for daily news and videos

Install App

ಕುಂಬ್ಳೆ: ಬಾಲಕಿಯರಿಗೆ ಆಮಿಷ ತೋರಿಸಿ ಲೈಂಗಿಕ ಪೀಡನೆ

Webdunia
ಬುಧವಾರ, 9 ಮಾರ್ಚ್ 2011 (18:21 IST)
ಕಾಸರಗೋಡು: ಐವತ್ತರ ಹರೆಯದ ಕಾಮುಕ ಲಾಟರಿ ಅಂಗಡಿ ಮಾಲೀಕನೊಬ್ಬ, ಸ್ಥಳೀಯ ವಿದ್ಯಾರ್ಥಿನಿಯರಿಗೆ ಹಣ ಮತ್ತು ಚಾಕೊಲೆಟ್ ಮುಂತಾದ ತಿಂಡಿಯ ಆಮಿಷ ತೋರಿಸಿ, ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಘಟನೆಯೊಂದು ಕುಂಬಳೆಯಿಂದ ವರದಿಯಾಗಿದೆ. ಕಳೆದ ಒಂದು ವರ್ಷದಿಂದ ಆರೋಪಿಯು ಇದುವರೆಗೆ ಆರೋಪಿಯು ಸುಮಾರು 20ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಕಾಸರಗೋಡು ಚೈಲ್ಡ್ ಲೈನ್ ಎಂಬ ಸಮಾಜಸೇವಾ ಸಂಸ್ಥೆಯ ಅಧಿಕಾರಿಗಳು ಈ ಘಟನೆಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿನ ಶಾಲೆಯ ಅಧ್ಯಾಪಕರ ನೆರವಿನಿಂದ, ಕೆಲವು ಮಕ್ಕಳ ಚೀಲ ತಪಾಸಣೆ ಮಾಡಿದಾಗ, ಅದರೊಳಗೆ 50, 100 ರೂಪಾಯಿ ನೋಟುಗಳಿರುವುದು ಪತ್ತೆಯಾಗಿತ್ತು. ಈ ಹಣವೆಲ್ಲಿಂದ ಬಂತು ಎಂದು ಕೇಳಿದಾಗ ವಿಷಯ ಬಯಲಿಗೆ ಬಂದಿತ್ತು ಎಂದು ಮೂಲಗಳು ತಿಳಿಸಿದ್ದಾರೆ.

ಅಂಗಡಿ ಮಾಲೀಕ ತಮಗೆ ಹಣ ಕೊಟ್ಟು, ಕರೆಯುತ್ತಿದ್ದ ಮತ್ತು ತಿಂಡಿಯನ್ನೂ ಕೊಡುತ್ತಿದ್ದ ಎಂದು ಕುಂಬಳೆಯ ಸರಕಾರಿ ಅಪ್ಪರ್ ಪ್ರೈಮರಿ ಶಾಲೆಯ ವಿದ್ಯಾರ್ಥಿನಿಯರು ಬಾಯಿಬಿಟ್ಟಿದ್ದಾರೆ.

ಚೈಲ್ಡ್‌ಲೈನ್ ಸ್ವಯಂ ಸೇವಾ ಸಂಸ್ಥೆಯು ಈ ಕುರಿತು ಕಾಸರಗೋಡು ಜಿಲ್ಲಾ ಎಸ್ಪಿಗೆ ದೂರು ನೀಡಿದೆ.

ಈ ನಡುವೆ, ವಿವಿಧ ಪಕ್ಷಗಳಿಗೆ ಸೇರಿದ ಯುವ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮಾಡಿದ್ದು, ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿವೆ.

ಇದೇ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಲ್ಪ ಬಲವನ್ನೂ ಪ್ರಯೋಗಿಸಬೇಕಾಯಿತು. ಲಾಟರಿ ಅಂಗಡಿಯನ್ನು ಪುಡಿ ಮಾಡಲು ಹೊರಟಾಗ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭ ಕೆಲವು ಮಂದಿಗೆ ಗಾಯಗಳೂ ಆಗಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು