Webdunia - Bharat's app for daily news and videos

Install App

ಕಾಲ್ಕಡಗ ಬಿಚ್ಚಲಾಗದೇ ಕಾಲುಗಳನ್ನೇ ಕಡಿದ ದರೋಡೆಕೋರರು

Webdunia
ಗುರುವಾರ, 3 ಅಕ್ಟೋಬರ್ 2013 (18:49 IST)
PR
PR
ಜೈಪುರ: ಕೆಲವು ಅಜ್ಞಾತ ದರೋಡೆಕೋರರು ಜೈಪುರದ ಬಳಿಯ ಗ್ರಾಮವೊಂದರಲ್ಲಿ 50 ವರ್ಷ ವಯಸ್ಸಿನ ಮಹಿಳೆಯನ್ನು ಕೊಂದು ಅವಳ ಕಾಲನ್ನು ಕಡಿದುಕೊಂಡು ಹೋಗಿದ್ದಾರೆ. ಮಹಿಳೆಯನ್ನು ಕೊಂದು ಅವಳ ಕಾಲನ್ನು ಕಡಿದುಕೊಂಡು ಹೋಗಿದ್ದೇಕೆಂದು ಆಶ್ಚರ್ಯವಾಗಬಹುದು. ಆದರೆ ಕಾಲಿನಲ್ಲಿದ್ದ ಕಾಲ್ಕಡಗವನ್ನು ಬಿಚ್ಚಲು ಸಾಧ್ಯವಾಗದೇ ಮಹಿಳೆಯನ್ನು ಕೊಂದು ಕಾಲುಗಳನ್ನೇ ಕಡಿಯುವ ಪೈಶಾಚಿಕ ಕೃತ್ಯವೆಸಗಿದ್ದಾರೆ. ಮಹಿಳೆಯ ದೇಹ ಬುಧವಾರ ಸಿಕ್ಕಿದ್ದು ಅವಳ ಕಾಲುಗಳೇ ನಾಪತ್ತೆಯಾಗಿತ್ತು. ದರೋಡೆಕೋರರು ಭೀಕರ ಹತ್ಯೆ ನಡೆಸಿದ ಬಳಿಕ ಕಾಲುಗಳನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರಕ್ಕೆ 35 ಕಿಮೀ ದೂರ ಫಾಗಿ ಗ್ರಾಮದ ಬಳಿಕ ಶಂಕರಪುರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ರುಕ್ಮಿಣಿ ದೇವಿ ಎಂಬ ಮಹಿಳೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ತೆರಳಿದ್ದಾಗ ನಾಪತ್ತೆಯಾಗಿದ್ದಳು. ನಂತರ ದಾರಿಹೋಕರು ಕಾಲುಗಳಿಲ್ಲದ ಅವಳ ದೇಹವನ್ನು ಪತ್ತೆಹಚ್ಚಿದ್ದರು. ಮಹಿಳೆ ಬೆಳ್ಳಿಯ ಕಾಲ್ಕಡಗಗಳನ್ನು ಧರಿಸಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ. ಬೆಳ್ಳಿಯ ಕಾಲ್ಕಡಗಕ್ಕಾಗಿ ವಯಸ್ಕ ಮಹಿಳೆಯರನ್ನು ಹತ್ಯೆ ಮಾಡುವ ತಂಡಕ್ಕಾಗಿ ಈಗ ಪೊಲೀಸರು ಶೋಧ ನಡೆಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments