ಕಾರ್ಗಿಲ್ ಯುದ್ಧವನ್ನು ಜಯಿಸಿದ್ದು ಹಿಂದೂ ಸೈನಿಕರಲ್ಲ, ಮುಸ್ಲಿಂ ಸೈನಿಕರು: ಅಜಮ್ ಖಾನ್
ಗಾಝಿಯಾಬಾದ್ , ಬುಧವಾರ, 9 ಏಪ್ರಿಲ್ 2014 (10:13 IST)
ಪದೇ ಪದೇ ವಿವಾದವನ್ನು ಸೃಷ್ಟಿಸುವುದರ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ 1999ರಲ್ಲಿ ಪಾಕಿಸ್ತಾನದ ಜತೆಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿಗಾಗಿ ಕೇವಲ ಮುಸ್ಲಿಂ ಸೈನಿಕರು ಹೋರಾಡಿದ್ದರು ಎಂಬುದರ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.
ಕಳೆದ ರಾತ್ರಿ ಗಾಝಿಯಾಬಾದ್ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾರ್ಗಿಲ್ ಯುದ್ಧದ ವಿಷಯವನ್ನು ಸಹ ಎಳೆದು ತಂದ ಉತ್ತರಪ್ರದೇಶದ ಮಂತ್ರಿಯ ಹೇಳಿಕೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದವರಲ್ಲಿ ಹಿಂದೂ ಸೈನಿಕರಿರಲಿಲ್ಲ. ವಿಜಯಕ್ಕಾಗಿ ಹೋರಾಡಿದವರು ಮುಸ್ಲಿಂ ಯೋಧರಾಗಿದ್ದರು. ಮುಸ್ಲಿಂ ಸಮುದಾಯದವರಷ್ಟು ಜಾಗರೂಕತೆಯಿಂದ ದೇಶದ ಗಡಿಯನ್ನು ಯಾರೂ ಕಾಯಲಾರರು ಎನ್ನುವ ಅಸಂಬದ್ಧ ಹೇಳಿಕೆಯನ್ನು ನೀಡುವುದರ ಮೂಲಕ ಖಾನ್ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. "
ನಮ್ಮನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಿ. ನಮಗಿಂತ ಉತ್ತಮವಾಗಿ ದೇಶದ ಸರಹದ್ದನ್ನು ಯಾರೂ ಕಾಯಲಾರರು" ಎಂದು ಅವರು ಹೇಳಿದ್ದಾರೆ. ಖಾನ್ ಹೇಳಿಕೆಗೆ ಜನರಲ್ ವಿ.ಕೆ ಸಿಂಗ್ ಪ್ರತಿಕ್ರಿಯೆ.....
ಅಜಮ್ ಖಾನ್ರವರ ಈ ವಿವಾದಾತ್ಮಕ ಭಾಷಣಕ್ಕೆ ತೀವೃವಾಗಿ ಖಂಡಿಸಿರುವ ಬಿಜೆಪಿ ಅಭ್ಯರ್ಥಿ, ಮಾಜಿ ಸೇನಾಧಿಕಾರಿ ಜನರಲ್ ವಿ.ಕೆ ಸಿಂಗ್ ಕಾರ್ಗಿಲ್ ಯುದ್ಧವನ್ನು ಭಾರತೀಯರು ಗೆದ್ದಿದ್ದರು ಎಂದು ಹೇಳಿದ್ದಾರೆ.