ಜನಸಾಮಾನ್ಯರ ಜೀವನ ಹದಗೆಡಲು ಕಾಂಗ್ರೆಸ್ ಪಕ್ಷ ನೇರ ಹೊಣೆಯಾಗಿದ್ದು,ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆಗೊಳಿಸಿದಲ್ಲಿ ಅದೇ ಮಹಾತ್ಮಾಗಾಂಧಿಗೆ ನಿಜವಾದ ಶೃದ್ದಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶದ ಏಕತೆಯನ್ನು ಕಾಪಾಡಬೇಕಾದಲ್ಲಿ ರಾಜಕೀಯದಿಂದ ಕಾಂಗ್ರೆಸ್ ಪಕ್ಷವನ್ನು ಅಳಿಸಿಹಾಕಬೇಕಾಗುತ್ತದೆ ಸೋನಿಯಾ ಕಾಂಗ್ರೆಸ್ನ್ನು ಅಧಿಕಾರದಿಂದ ಕಿತ್ತುಹಾಕಿ ದೇಶಭಕ್ತ ರಾಜಕೀಯ ಪಕ್ಷವಾದ ಬಿಜೆಪಿಗೆ ಅಧಿಕಾರ ನೀಡಿ ಎಂದು ಕೋರಿದರು.
ಹಿಂದುಳಿದ, ಶೋಷಿತ, ಬಡವರನ್ನು ಕಾಂಗ್ರೆಸ್ ಪಕ್ಷ ವಂಚಿಸಿದೆ. ಬಡವರನ್ನು ಶೋಷಿಸುವುದೇ ಬಿಟ್ಟರೆ ಕಾಂಗ್ರೆಸ್ ಬಡವರ ಪರ ಯಾವುದೇ ಕಾರ್ಯ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.
ಡಿಸೆಂಬರ್ 1 ರಂದು ನಡೆಯಲಿರುವ 199 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಾಣೆ ನಡೆಯಲಿದ್ದು, ಇಂದು ಪ್ರಚಾರದ ಕೊನೆಯ ದಿನವಾಗಿದೆ. ಚಾರು ವಿಧಾನಸಭೆ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಸಾವನ್ನಪ್ಪಿದ್ದರಿಂದ ಚುನಾವಣೆ ಮುಂದೂಡಲಾಗಿದೆ.