Webdunia - Bharat's app for daily news and videos

Install App

ಕಪ್ಪುಹಣ ಮೂಲ ಹುಡುಕದ ಕೇಂದ್ರಕ್ಕೆ ಸುಪ್ರೀಂ ತಪರಾಕಿ

Webdunia
ಸೋಮವಾರ, 28 ಮಾರ್ಚ್ 2011 (16:37 IST)
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಕಪ್ಪುಹಣದ ನಿರ್ದಿಷ್ಟ ಮೂಲಗಳನ್ನು ತನಿಖೆ ನಡೆಸದ ಕೇಂದ್ರ ಸರಕಾರಕ್ಕೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್, ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದೆ.

ಅದೇ ಹೊತ್ತಿಗೆ ಕಪ್ಪುಹಣ ಪ್ರಕರಣದಲ್ಲಿ ಸರಕಾರವು ಪುಣೆಯ ಕುದುರೆ ಲಾಯದ ಮಾಲಕ ಹಸನ್ ಆಲಿ ಖಾನ್ ಒಬ್ಬನನ್ನೇ ಗುರಿ ಮಾಡುತ್ತಿರುವುದು ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಶೇಖರಿಸಿಟ್ಟಿರುವ ಇತರ ಯಾವುದೇ ಹೆಸರುಗಳು ಹೊರಗೆ ಬರದೇ ಇರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಹೆಚ್ಚಿನ ಮಾಹಿತಿಗಳು ಹೊರಗೆ ಬರುವುದೇ ಇಲ್ಲ. ಕೇವಲ ಒಬ್ಬ ವ್ಯಕ್ತಿ ಬಗ್ಗೆ ಮಾತ್ರ ಇಲ್ಲಿದ್ದಾರೆ. ಇತರರ ಬಗ್ಗೆ ಏನಾಗಿದೆ ಎಂದು ಪ್ರಕರಣದ ತನಿಖೆ ಕುರಿತ ಜಾರಿ ನಿರ್ದೇಶನಾಲಯದ ಸ್ಟೇಟಸ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣ್ಯಂ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿತು.

ಸ್ಟೇಟಸ್ ವರದಿಯನ್ನು ಸ್ವೀಕರಿಸಿದ ಬಳಿಕವೂ ಸರಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿತು. ಹಸನ್ ಆಲಿಖಾನ್ ಪಾಸ್‌ಪೋರ್ಟ್ ಸಂಬಂಧದ ವಿಚಾರ ಸೇರಿದಂತೆ ಸರಕಾರವು ಈ ಪ್ರಕರಣದ ತನಿಖೆಯಲ್ಲಿ ತೆಗೆದುಕೊಂಡಿರುವ ಹೆಜ್ಜೆಗಳನ್ನು ಟೀಕಿಸಿತು.

' ಜಾರಿ ನಿರ್ದೇಶನಾಲಯದ ಸ್ಟೇಟಸ್ ವರದಿಯನ್ನು ನೋಡಿದ ನಂತರ ಸುಮ್ಮನೆ ಕೂರುವುದು ಸಾಧ್ಯವೇ ಇಲ್ಲ. ಈ ಎಲ್ಲಾ ತನಿಖಾ ದಳಗಳು 2008ರಿಂದ ಇದುವರೆಗೆ ಯಾಕೆ ನಿದ್ದೆಯಲ್ಲಿದ್ದವು? ನಾವು ಕ್ರಮಕ್ಕೆ ಮುಂದಾದ ನಂತರ ಯಾಕೆ ಅವುಗಳು ಚಲನೆ ಪಡೆದುಕೊಂಡವು? ರಿಟ್ ಅರ್ಜಿ ಕೋರ್ಟಿಗೆ ಸಲ್ಲಿಕೆಯಾಗದೇ ಇರುತ್ತಿದ್ದರೆ, ಏನೂ ಆಗುತ್ತಿರಲಿಲ್ಲ' ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

ಭಾರತೀಯ ಪ್ರಜೆಗಳು ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿರುವ ಕಪ್ಪುಹಣವನ್ನು ವಾಪಸ್ ತರಬೇಕು ಎಂದು ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಮೇಲಿನಂತೆ ನುಡಿಯಿತು.

ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿನ ಕಪ್ಪುಹಣಕ್ಕೆ ಸಂಬಂಧಪಟ್ಟ ಪ್ರಕರಣಗಳ ಸಂಪೂರ್ಣ ತನಿಖೆಗಾಗಿ ಗುಪ್ತಚರ ಇಲಾಖೆ, ರಾ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನೊಳಗೊಂಡ ವಿಶೇಷ ತನಿಖಾ ದಳವನ್ನು (ಸಿಟ್) ಅಸ್ತಿತ್ವಕ್ಕೆ ತರುವ ತನ್ನ ಸಲಹೆಯನ್ನು ಇದೇ ಸಂದರ್ಭದಲ್ಲಿ ನ್ಯಾಯಾಲಯ ಪುನರುಚ್ಛರಿಸಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

Show comments