Webdunia - Bharat's app for daily news and videos

Install App

ಓಟಿಗಾಗಿ ನೋಟು: ಹಿಂದೆ ಮಾಡಿದ್ದಕ್ಕೆ ನಾವು ಜವಾಬ್ದಾರರಲ್ಲ - ಕಾಂಗ್ರೆಸ್

Webdunia
ಗುರುವಾರ, 17 ಮಾರ್ಚ್ 2011 (13:52 IST)
PTI
ಕಾಂಗ್ರೆಸ್ ಪಕ್ಷವು ಕುರ್ಚಿ ಉಳಿಸಿಕೊಳ್ಳಲು ಕಳೆದ ಅವಧಿಯಲ್ಲಿ ಸಂಸದರಿಗೆ ತಲಾ 10 ಕೋಟಿ ರೂಪಾಯಿ ಲಂಚ ನೀಡಿತ್ತು ಎಂಬ ಮಾಹಿತಿಯು ವಿಕಿಲೀಕ್ಸ್ ಮೂಲಕ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಸಭೆಯಲ್ಲಿ, ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು 'ನಾವಿದನ್ನು ಧೃಢಪಡಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ' ಎನ್ನುತ್ತಾ ಸರಕಾರವನ್ನು ಸಮರ್ಥಿಸಿಕೊಂಡರು.

ಇದೆಲ್ಲಾ ನಡೆದದ್ದು ಹಿಂದಿನ (14ನೇ) ಲೋಕಸಭೆಯಲ್ಲಿ. ನಾವೀಗ 15ನೇ ಲೋಕಸಭೆಯಲ್ಲಿ ಕೂಡ ಜನರಿಂದ ಚುನಾಯಿತರಾಗಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದೇವೆ. ಹಿಂದಿನ ಲೋಕಸಭೆಯಲ್ಲಾದ ಸಂಗತಿಗಳಿಗೆ ನಾವು ಉತ್ತರದಾಯಿಯಲ್ಲ, ನಾವು ಹಾಲಿ ಲೋಕಸಭೆಗೆ ಜವಾಬ್ದಾರರು ಎಂದು ಪ್ರಣಬ್ ಹೇಳಿದ್ದು ಪ್ರತಿಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿತು.

ಓಟಿಗಾಗಿ ನೋಟು ಹಗರಣವು ಬಯಲಾಗುತ್ತಿದ್ದಂತೆಯೇ ಪ್ರಧಾನಿ ಮನಮೋಹನ್ ಸಿಂಗ್ ಮತ್ತವರ ಸರಕಾರವು ಎಲ್ಲ ಕಡೆಗಳಿಂದಲೂ ದಾಳಿಯನ್ನು ಎದುರಿಸುತ್ತಿದ್ದು, ವಾಗ್ದಾಳಿ ತಪ್ಪಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸುತ್ತಿದೆ.

ಸರಕಾರದ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಬಳಿಕ ಉತ್ತರಿಸಿದ ಪ್ರಣಬ್, ವಿಕಿಲೀಕ್ಸ್‌ನಲ್ಲಿ ಬಂದಿರುವ ಕೇಬಲ್‌ಗಳು ಒಂದು ಸಾರ್ವಭೌಮ ರಾಷ್ಟ್ರ ಮತ್ತು ಅದರ ವಿದೇಶೀ ಕಾರ್ಯಕ್ರಮದ ನಡುವಿನ ಸಂವಹನವಷ್ಟೇ. ಅವರಿಗೆ ರಾಜತಾಂತ್ರಿಕ ಸಂರಕ್ಷಣೆ (ಡಿಪ್ಲೊಮ್ಯಾಟಿಕ್ ಇಮ್ಯುನಿಟಿ) ಇರುವುದರಿಂದ ಸರಕಾರವು ಇದನ್ನು ದೃಢಪಡಿಸುವಂತಿಲ್ಲ ಮತ್ತು ನಿರಾಕರಿಸುವಂತೆಯೂ ಇಲ್ಲ ಎಂದರು.

ಪತ್ರಿಕೆಗಳಲ್ಲಿ ಬಂದಿರುವ ಆರೋಪಗಳು ಈ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ಸಾಬೀತು ಮಾಡುವುದು ಸಾಧ್ಯವಿಲ್ಲ ಎಂದೂ ಪ್ರಣಬ್ ಹೇಳಿದರು.

ಹಾಗಿದ್ದರೆ ಹಿಂದೆ ಮಾಡಿದ ತಪ್ಪಿಗಾಗಿ 2ಜಿ ಹಗರಣದ ತನಿಖೆ ನಡೆಯುತ್ತಿದೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೇಲಿನ ಇಪ್ಪತ್ತು ವರ್ಷಗಳಷ್ಟು ಹಳೆಯ ಕೇಸುಗಳು ಕೂಡ ತನಿಖೆಯಾಗುತ್ತಿದೆ. ಹೀಗಿರುವಾಗ ಹಿಂದೆ ಮಾಡಿದ ತಪ್ಪುಗಳಿಗೆ ಯಾರು ಜವಾಬ್ದಾರರು? ಎಂಬುದು ಮತದಾರರ ಪ್ರಶ್ನೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

Show comments