Webdunia - Bharat's app for daily news and videos

Install App

ಏನು ಪೈಲಟ್ ಹೆಂಗಸಾ?...ಹಾಗಾದ್ರೆ ನಾನು ಪ್ರಯಾಣಿಸಲ್ಲ!

Webdunia
ಭಾನುವಾರ, 27 ಫೆಬ್ರವರಿ 2011 (12:05 IST)
' ಏನು ಈ ವಿಮಾನದ ಪೈಲಟ್ ಹೆಂಗಸಾ...? ಹಾಗಾದ್ರೆ ನಾನು ಪ್ರಯಾಣಿಸಲ್ಲ ಎಂದು ಪ್ರಯಾಣಿಕನೊಬ್ಬ ರಚ್ಚೆ ಹಿಡಿದ ಪರಿಣಾಮ ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ವಿಮಾನವೊಂದು ಸುಮಾರು ಒಂದೂವರೆ ಗಂಟೆ ತಡವಾಗಿ ಹಾರಾಟ ನಡೆಸಿದ ವಿಚಿತ್ರ ಘಟನೆಯೊಂದು ನಡೆದಿದೆ.

ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ದೆಹಲಿಯಿಂದ ಮುಂಬೈಗೆ ಶುಕ್ರವಾರ ಬೆಳಿಗ್ಗೆ 8-10ಕ್ಕೆ ಹೊರಡಬೇಕಿತ್ತು. ಆದರೆ ಅದು ಹಾರಾಟ ಆರಂಭಿಸಿದ್ದು 9.40ಕ್ಕೆ. ಒಂದೆಡೆ ದಟ್ಟ ಮಂಜಿನಿಂದಾಗಿ ವಿಮಾನ ವಿಳಂಬವಾಗಿತ್ತು.

ಮಂಜಿನಿಂದಾಗಿ ವಿಮಾನ 9ಗಂಟೆಗೆ ಹೊರಡಲು ಅನುವಾದಾಗ. ವಿಮಾನದ ಪೈಲಟ್ ಹೆಸರು ಹೇಳುತ್ತಿದ್ದಂತೆಯೇ ಕಿರಿಕ್ ಪ್ರಯಾಣಿಕನೊಬ್ಬ, ಏನು ಈ ವಿಮಾನಕ್ಕೆ ಮಹಿಳೆ ಪೈಲಟ್...ಹಾಗಾದ್ರೆ ನಾನು ಇದರಲ್ಲಿ ಪ್ರಯಾಣಿಸಲ್ಲ ಎಂದು ರಗಳೆ ಮಾಡಿರುವುದಾಗಿ ಸಹ ಪ್ರಯಾಣಿಕರಾದ ಪಾರ್ಥಾ ಗುಹಾ ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪೈಲಟ್ ಮಹಿಳೆ ಎಂದು ತಿಳಿಯುತ್ತಿದ್ದಂತೆಯೇ ಈ ಅಸಾಮಿ, ನಾನು ಸಾಯಬೇಕಿಲ್ಲ. ಮನೆಯನ್ನೇ ನೆಟ್ಟಗೆ ಸರಿದೂಗಿಸಲು ಬಾರದ ಹೆಂಗಸು, ವಿಮಾನ ಹಾರಿಸುತ್ತಾಳಾ ಎಂದು ಸಹ ಪ್ರಯಾಣಿಕರ ಜತೆಗೇ ವಾಗ್ವಾದಕ್ಕಿಳಿದಿದ್ದ!

ತದನಂತರ ಈ ಪ್ರಯಾಣಿಕ ಗಗನಸಖಿಯರನ್ನು ಕರೆದು, ಮಹಿಳಾ ಪೈಲಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಜಗಳಕ್ಕೆ ಬಿದ್ದಿದ್ದ. ಆಗ ಸಿಟ್ಟುಗೊಂಡ ಸಿಬ್ಬಂದಿಗಳು, ಹೀಗೆ ಗಲಾಟೆ ಮಾಡಿದ್ರೆ ವಿಮಾನದಿಂದ ಹೊರ ಹಾಕುವುದಾಗಿಯೂ ಬೆದರಿಕೆ ಹಾಕಿದರು. ಇದರಿಂದಾಗಿ ಸುಮಾರು 40 ನಿಮಿಷ ಹಾಳಾಗಿತ್ತು. ಜತೆಗೆ ಸಹ ಪ್ರಯಾಣಿಕರು ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು.

ಕೊನೆಗೂ ಲಗೇಜ್ ಸಹಿತ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ ಮೇಲೆ ಪ್ರಯಾಣಿಕ ತೆಪ್ಪಗೆ ಕುಳಿತ ಮೇಲೆಯೇ ವಿಮಾನ ಹಾರಾಟ ಆರಂಭಿಸಿತ್ತು. ಈ ಕಿರಿಕ್ ಪ್ರಯಾಣಿಕ ಮಾನಸಿಕವಾಗಿ ಅಸ್ವಸ್ಥನಾಗಿರುವುದಾಗಿ ವಿಮಾನ ನಿಲ್ದಾಣದ ಅಧಕಾರಿಗಳು ತಿಳಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಆರಾಮಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್‌, ಭಯಾನಕ ವಿಡಿಯೋ

ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಪಕ್ಕಾ, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ: ಆರ್‌ ಅಶೋಕ್‌

Show comments