Select Your Language

Notifications

webdunia
webdunia
webdunia
webdunia

ಉ.ಪ್ರ. ಸಚಿವರನ್ನು ಟೀಕಿಸಿದ ಲೇಖಕನ ಬಂಧನ

ಉ.ಪ್ರ. ಸಚಿವರನ್ನು ಟೀಕಿಸಿದ ಲೇಖಕನ ಬಂಧನ
, ಮಂಗಳವಾರ, 6 ಆಗಸ್ಟ್ 2013 (19:19 IST)
PR
PR
ಲಕ್ನೋ: ನಾಗಪಾಲ್ ವಿರುದ್ಧ ಪ್ರತಿಕ್ರಿಯಿಸಿದ ಉ.ಪ್ರ. ಸಚಿವ ಅಜಮ್ ಖಾನ್ ಅವರನ್ನು ಟೀಕಿಸಿ ಆನ್‌ಲೈನ್ ಸಂಪಾದಕೀಯ ಬರೆದಿದ್ದಕ್ಕಾಗಿ ಕನ್ವಲ್ ಭಾರ್ತಿ ಎಂಬ ಲೇಖಕನನ್ನು ಬಂಧಿಸಲಾಗಿದೆ. ಎರಡು ಧಾರ್ಮಿಕ ಗುಂಪುಗಳ ನಡುವೆ ಸಾಮರಸ್ಯ ಕೆಡಿಸಿದ್ದಾರೆಂದು ಅವರ ವಿರುದ್ಧ ಆರೋಪಿಸಲಾಗಿದೆ.

ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತುಗೊಳಿಸಿದ ಕ್ರಮಕ್ಕೆ ರಾಷ್ಟ್ರವ್ಯಾಪಿ ಟೀಕೆಗೆ ಒಳಪಟ್ಟಿದ್ದರೂ, ಉತ್ತರಪ್ರದೇಶ ಸರ್ಕಾರ ಮಣಿಯುವಂತೆ ಕಾಣುತ್ತಿಲ್ಲ. ಅಜಮ್ ಖಾನ್ ಖಾಸಗಿ ಸಹಾಯಕ ಶಾನು ಖಾನ್ ದೂರಿನ ಆಧಾರದ ಮೇಲೆ ಭಾರ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಭಾವಶಾಲಿ ಮರಳು ಮೈನಿಂಗ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ನಾಗಪಾಲ್ ಅವರನ್ನು ಬಂಧಿಸಿದ್ದಾರೆ ಎಂದು ನಾಗಪಾಲ್ ಬೆಂಬಲಿಗರು ದೂರಿದ್ದಾರೆ.

Share this Story:

Follow Webdunia kannada