Select Your Language

Notifications

webdunia
webdunia
webdunia
webdunia

ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ರಾಜೀನಾಮೆ

ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ರಾಜೀನಾಮೆ
ಡೆಹ್ರಾಡನ್ , ಶುಕ್ರವಾರ, 31 ಜನವರಿ 2014 (12:32 IST)
PTI
ಕಾಂಗ್ರೆಸ್ ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಆಹಾರ ಸಚಿವ ಪ್ರೀತಮ್ ಸಿಂಗ್ ಮತ್ತು ಲೋಕಸಭೆ ಸದಸ್ಯ ಸತ್ಪಾಲ್ ಮಹಾರಾಜ್ ಅವರ ಹೆಸರೂ ಕೇಳಿಬರುತ್ತಿದೆ.

ಹರೀಶ್ ರಾವತ್ ಹೆಸರು ಆ ಹುದ್ದೆಗೆ ಕೇಳಿಬರುತ್ತಿರುವ ನಡುವೆ 22 ಕಾಂಗ್ರೆಸ್ ಶಾಸಕರು ಸೋನಿಯಾಗೆ ಪತ್ರ ಬರೆದು ಹರೀಶ್ ರಾವತ್ ಹೆಸರಿಗೆ ಅತೃಪ್ತಿ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ.

Share this Story:

Follow Webdunia kannada