Webdunia - Bharat's app for daily news and videos

Install App

ಉತ್ತರಾಖಂಡದಲ್ಲಿ ಲಘು ಭೂಕಂಪನ; ಭಾರತಕ್ಕೂ ಭೀತಿ?

Webdunia
ಸೋಮವಾರ, 14 ಮಾರ್ಚ್ 2011 (21:04 IST)
ಮಾರ್ಚ್ 19ರ 'ಸೂಪರ್ ಮೂನ್' ಭೀತಿಗಳ ಬೆನ್ನಿಗೆ ಭೂಕಂಪ ಮತ್ತು ಸುನಾಮಿ ಸುಳಿಗೆ ಸಿಲುಕಿ ಜಪಾನ್ ನಲುಗುತ್ತಿರುವ ನಡುವೆ ಭಾರತದಲ್ಲೂ ಲಘು ಭೂಕಂಪನವಾಗಿರುವ ವರದಿ ಬಂದಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಮಿಯು ಲಘುವಾಗಿ ಕಂಪಿಸಿದೆ.

ಜಪಾನ್‌ ಮೇಲೆ ಶುಕ್ರವಾರ ಸುನಾಮಿ ಅಪ್ಪಳಿಸಿದ ಮೇಲೆ ಸ್ಪಷ್ಟನೆ ನೀಡಿದ್ದ ಭಾರತೀಯ ಸುನಾಮಿ ಕೇಂದ್ರದ ಅಧಿಕಾರಿಗಳು ( India Tsunami Centre), ಅಂತಹ ಸಾಧ್ಯತೆಗಳು ಇಲ್ಲ; ಭಾರತಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ ಎಂದು ಹೇಳಿಕೆ ನೀಡಿದ್ದರು.

ಉತ್ತರಾಖಂಡದ ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.3ರ ತೀವ್ರತೆಯನ್ನು ಇದು ದಾಖಲಿಸಿದೆ.

ಭೂಕಂಪನದ ಅನುಭವವಾಗುತ್ತಿದ್ದಂತೆ ಭೀತಿಯಿಂದ ಜನತೆ ಮನೆಯಿಂದ ಹೊರಗೋಡಿದರು. ಅಪರಾಹ್ನ 2.31ಕ್ಕೆ ಭೂಕಂಪನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಮೋಲಿ, ಗೋಪೇಶ್ವರ್, ಕರ್ಣಪ್ರಯಾಗ್, ರುದ್ರಪ್ರಯಾಗ್ ಮತ್ತು ಉಖಿಮತ್ ಪ್ರದೇಶಗಳಲ್ಲಿನ ಜನತೆ ಘಟನೆಯಿಂದ ತೀವ್ರ ಗಾಬರಿಗೊಳಗಾಗಿದ್ದಾರೆ. ಯಾವುದೇ ಆಸ್ತಿ-ಪಾಸ್ತಿ ಅಥವಾ ಜೀವಹಾನಿಯಾಗಿರುವ ಬಗ್ಗೆ ವರದಿಗಳು ಬಂದಿಲ್ಲ.

ಈ ಪ್ರದೇಶಗಳಲ್ಲಿ 1999ರಲ್ಲಿ ಪ್ರಬಲ ಭೂಕಂಪಗಳು ನಡೆದಿದ್ದವು. ಘಟನೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ನಿರಾಶ್ರಿತರಾಗಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಮಾ ಜಾರಿ ಮಾಡಿದ್ರೂ ಹೆದರಲ್ಲ: ಆ.5ರಂದು ಸಾರಿಗೆ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜಗದೀಪ್ ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಹುದ್ದೆಯ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಆಯೋಗ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

Show comments