Select Your Language

Notifications

webdunia
webdunia
webdunia
webdunia

ಉಗ್ರವಾದ ಸ್ವೀಕಾರ್ಹವಲ್ಲ: ಪಾಕ್‌ಗೆ ಪ್ರಣಬ್ ಕಠಿಣ ಸಂದೇಶ ರವಾನೆ

ಉಗ್ರವಾದ ಸ್ವೀಕಾರ್ಹವಲ್ಲ: ಪಾಕ್‌ಗೆ ಪ್ರಣಬ್ ಕಠಿಣ ಸಂದೇಶ ರವಾನೆ
ಬ್ರೂಸೆಲ್ಸ್ , ಶುಕ್ರವಾರ, 4 ಅಕ್ಟೋಬರ್ 2013 (16:11 IST)
PTI
ಪಾಕಿಸ್ತಾನದೊಂದಿಗೆ ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಅದಕ್ಕಾಗಿ ದೇಶದ ಏಕತೆಯೊಂದಿಗೆ ರಾಜಿಯಿಲ್ಲ. ಪಾಕ್ ಸರಕಾರ ಪ್ರಾಯೋಜಿತ ಭಯೋತ್ಪಾದನೆ ಸಮ್ಮತಾರ್ಹವಲ್ಲ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಉಗ್ರರ ಕೃತ್ಯಗಳಿಗೆ ಪಾಕ್ ಹೊಣೆಯಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಪ್ರಣಬ್ ಉಗ್ರರು ಸ್ವರ್ಗದಿಂದ ಬಂದು ಭಾರತದ ಮೇಲೆ ದಾಳಿ ಮಾಡುತ್ತಿಲ್ಲ. ಉಗ್ರರು ಪಾಕ್ ದೇಶದ ಮೂಲದವರು ಎನ್ನುವುದು ಜಗತ್ತಿಗೆ ತಿಳಿದಿದೆ ಎಂದರು.

ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳನ್ನು ನಾಶಪಡಿಸುವತ್ತ ಪಾಕ್ ಸರಕಾರ ಗಮನಹರಿಸಬೇಕಾಗಿದೆ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಭಾರತ ಹಲವು ಬಾರಿ ಒತ್ತಾಯಿಸಿದೆ ಎಂದು ಸ್ಪಷ್ಟಪಡಿಸಿದರು.

ಭಾರತ ನೆರೆಹೊರೆಯ ರಾಷ್ಟ್ರಗಳ ಭೂಮಿಯನ್ನು ಕಬಳಿಸುವ ಯಾವುದೇ ಉದ್ದೇಶ ಹೊಂದಿಲ್ಲ. ದೇಶದ ಏಕತೆಯನ್ನು ಕಾಪಾಡಿಕೊಂಡು ನೆರೆ ರಾಷ್ಟ್ರಗಳೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

Share this Story:

Follow Webdunia kannada