Select Your Language

Notifications

webdunia
webdunia
webdunia
webdunia

ಇದು ಬಾಲಿವುಡ್, ಅತ್ಯಾಚಾರಕ್ಕೊಳಗಾದ ಉದಯೋನ್ಮುಖ ನಟಿಯೊಬ್ಬಳ ಕರುಣಾಜನಕ ರಿಯಲ್ ಸ್ಟೋರಿ

ಇದು ಬಾಲಿವುಡ್, ಅತ್ಯಾಚಾರಕ್ಕೊಳಗಾದ ಉದಯೋನ್ಮುಖ ನಟಿಯೊಬ್ಬಳ ಕರುಣಾಜನಕ ರಿಯಲ್ ಸ್ಟೋರಿ
ಮುಂಬೈ , ಶನಿವಾರ, 5 ಏಪ್ರಿಲ್ 2014 (13:04 IST)
ಟೆಲಿವಿಜನ್ ಧಾರಾವಾಹಿಗಳಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ 25 ವರ್ಷ ವಯಸ್ಸಿನ ಉದಯೋನ್ಮುಖ ನಟಿಯನ್ನು ನಿರಂತರವಾಗಿ ಅತ್ಯಾಚಾರಗೈದ ಬಾಲಿವುಡ್ ಕ್ಯಾಮರಾಮೆನ್‌ ರವೀಂದ್ರ ನಾಥ್ ಘೋಷ್ ಪೊಲೀಸರ ಅತಿಥಿಯಾಗಿದ್ದಾನೆ.

ಹಲವಾರು ನಿರ್ಮಾಪಕರೊಂದಿಗೆ ಸಂಪರ್ಕ ಹೊಂದಿರುವ ಗೊರೆಗಾಂವ್ ನಿವಾಸಿಯಾದ ಕ್ಯಾಮರಾಮೆನ್ ಘೋಷ್‌, ಉದಯೋನ್ಮುಖ ನಟಿಯೊಬ್ಬಳಿಗೆ ಸೆಕ್ಸ್ ಸುಖ ನೀಡಿದಲ್ಲಿ ಧಾರವಾಹಿಗಳಲ್ಲಿ ನಟಿಸಲು ಚಾನ್ಸ್ ಕೊಡಿಸುವುದಾಗಿ ಆಮಿಷವೊಡ್ಡಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ.

ಕಳೆದ ಸೆಪ್ಟೆಂಬರ್ 2011ರಲ್ಲಿ ಘೋಶ್, ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದ ಸ್ವಾತಿ ಎನ್ನುವ ಯುವತಿಗೆ ಕರೆ ಮಾಡಿ ಅರೆಬತ್ತಲೆಯಾಗಿರುವ ಫೋಟೋಗಳನ್ನು ತೆಗೆದುಕೊಂಡು ಬಂದಲ್ಲಿ ಸಿನೆಮಾಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆಕೆ ನೀಡಿದ ಫೋಟೋಗಳನ್ನು ತೆಗೆದುಕೊಂಡು ಮುಂದಿನ ವಾರದಲ್ಲಿ ಕೆಲಸ ಖಚಿತ ಎಂದು ಬೊಗಳೆ ಬಿಟ್ಟಿದ್ದಾನೆ.

ಕೆಲ ದಿನಗಳ ನಂತರ ಘೋಷ್, ಯುವತಿಗೆ ಕರೆ ಮಾಡಿ ಲಂಚ್, ಡಿನ್ನರ್ ಎಂದು ಆಕರ್ಷಿಸುವ ಪ್ರಯತ್ನ ಮಾಡಿದ್ದಾನೆ. ಆದರೆ, ಹಲವು ದಿನಗಳು ಕಳೆದರೂ ಯಾವುದೇ ಅವಕಾಶ ದೊರೆಯದಿದ್ದರಿಂದ ಸ್ವಾತಿಗೆ ನಿರಾಸೆಯಾಗಿ ಘೋಷ್‌ನೊಂದಿಗೆ ಸಂಪರ್ಕ ಕಡಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಒಂದು ದಿನ ಮತ್ತೆ ಸ್ವಾತಿಗೆ ಕರೆ ಮಾಡಿದ ಘೋಶ್, ದೈಹಿಕ ಸುಖ ನೀಡಿದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿದ್ದಾನೆ.

ಸ್ವಾತಿ ದೈಹಿಕ ಸುಖ ನೀಡಲು ನಿರಾಕರಿಸಿದಾಗ ಫೋಟೋಗಳನ್ನು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಪತಿಗೆ ಕೂಡಾ ಫೋಟೋಗಳನ್ನು ರವಾನಿಸುವುದಾಗಿ ಹೆದರಿಸಿದ್ದಾನೆ. ಕಂಗಾಲಾದ ಸ್ವಾತಿ ಸೆಕ್ಸ್ ಸುಖ ನೀಡಲು ಒಪ್ಪಿದ್ದಾಳೆ. ಘೋಷ್ ಸ್ವಾತಿಯನ್ನುಹತ್ತಿರದಲ್ಲಿರುವ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ನಗ್ನ ಚಿತ್ರಗಳನ್ನು ತೆಗೆದಿದ್ದಾನೆ.

ಸುಮಾರು ಎರಡು ವರ್ಷಗಳ ಕಾಲ ಸ್ವಾತಿಯ ಮೇಲೆ ಅತ್ಯಾಚಾರವೆಸಗಿದ ನಂತರ 3 ಲಕ್ಷ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ನನ್ನ ಬಳಿ ಹಣವಿಲ್ಲವಾದ್ದರಿಂದ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದಾಳೆ. ಆಕ್ರೋಶಗೊಂಡ ಘೋಷ್ ಸ್ವಾತಿಯ ನಗ್ನ ಚಿತ್ರಗಳನ್ನು ಆಕೆಯ ಪತಿಗೆ ರವಾನಿಸಿ ಅನೈತಿಕ ಸಂಬಂಧವಿರುವುದಾಗಿ ಮಾಹಿತಿ ನೀಡಿದ್ದಾನೆ. ನನಗೆ ಭೂಗತ ದೊರೆಗಳೊಂದಿಗೆ ಸಂಪರ್ಕವಿದೆ ಎಂದೂ ಬೆದರಿಸಿದ್ದಾನೆ.

ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದ ಸ್ವಾತಿಯ ಪತಿ ಫೋಟೋಗಳನ್ನು ನೋಡಿ ಆಕೆಗೆ ಕರೆ ಮಾಡುವುದನ್ನು ನಿಲ್ಲಿಸಿದ್ದಾನೆ. ನನ್ನ ಜೀವನ ಅಂತ್ಯವಾದಂತೆ ಎಂದು ಭಾವಿಸಿದ ಸ್ವಾತಿ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಆರೋಪಿ ರವೀಂದ್ರನಾಥ್‌ನನ್ನು ಪೊಲೀಸರು ಬಂಧಿಸಿದಾಗ ನಾನು ಯಾವ ತಪ್ಪು ಮಾಡಿಲ್ಲ. ಆಕೆಯೊಂದಿಗೆ ದೈಹಿಕ ಸಂಬಂಧವಿದೆ. ಕುಛ್ ಪಾನಾ ಕೇ ಲಿಯೇ ಕುಛ್ ಖೋನಾ ಪಡ್ತಾ ಹೈ ಎನ್ನುವುದು ಬಾಲಿವುಡ್‌ನ ಸಾಮಾನ್ಯ ನಿಯಮವಾಗಿದೆ. ಆಕೆಗಾಗಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೆಚ್ಚ ಮಾಡಿದ್ದೇನೆ ಎಂದು ಗೊಣಗಿದ್ದಾನೆ. ಪೊಲೀಸರಿಗೆ ಕೂಡಾ ಬೆದರಿಕೆ ಹಾಕಲು ಯತ್ನಿಸಿದ್ದಾನೆ. ಆದರೆ, ಪೊಲೀಸ್ ಪವರ್ ಬಳಸಿದ ನಂತರ ಇದೀಗ ಜೈಲು ಅತಿಥಿಯಾಗಿದ್ದಾನೆ.

Share this Story:

Follow Webdunia kannada