ಇಡೀ ದೇಶದ ಜನತೆ ಯೋಧರ ಜೊತೆಗಿದೆ: ಪ್ರಧಾನಿ
ಶ್ರೀನಗರ , ಬುಧವಾರ, 26 ಜೂನ್ 2013 (09:22 IST)
ದೇಶದಲ್ಲಿ ಉಗ್ರರನ್ನು ಬೆಳೆಯಲು ಯಾವುದೇ ಕಾರಣಕ್ಕೂ ಬಿಡೆವು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅವರು, ಸೋಮವಾರ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು. ಅಲ್ಲದೆ ಸೋನಿಯಾ ಅವರೊಂದಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡಿರುವ ಯೋಧರ ಆರೋಗ್ಯ ವಿಚಾರಿಸಿದರು. ಇಡೀ ದೇಶದ ಜನತೆ ಯೋಧರ ಜೊತೆಗಿದೆ. ಯಾವ ಕಾರಣಕ್ಕೂ ಉಗ್ರರನ್ನು ಬೆಳೆಯಲು ಬಿಡುವುದಿಲ್ಲ. ಅವರನ್ನು ಮಟ್ಟ ಹಾಕಿಯೇ ಹಾಕುತ್ತೇವೆ ಎಂದಿದ್ದಾರೆ. ನಮ್ಮ ಸೇನಾ ಪಡೆಯ ಯೋಧರು ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.