Select Your Language

Notifications

webdunia
webdunia
webdunia
webdunia

ಇಂದು ಸಂಜಯ್‌ದತ್ ಶಿಕ್ಷಾತೀರ್ಪು

ಇಂದು ಸಂಜಯ್‌ದತ್  ಶಿಕ್ಷಾತೀರ್ಪು
ಮುಂಬೈ , ಮಂಗಳವಾರ, 31 ಜುಲೈ 2007 (12:08 IST)
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ವಿಚಾರಿಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯದಲ್ಲಿ ಶಿಕ್ಷೆಗೀಡಾಗಿರುವ ಬಾಲಿವುಡ್‌ನಟ ಸಂಜಯ್‌ದತ್‌ನ ಶಿಕ್ಷೆಯ ವಿವರಣೆ ಇಂದು ತೀರ್ಪಾಗಲಿದೆ.

ಮುಂಬೈ ಸರಣಿ ಸ್ಫೋಟ ಪ್ರಕರಣದ ವಿಚಾರಣೆಯನ್ನು ಟಾಡಾ ನ್ಯಾಯಾಲಯವು ಕಳೆದ ವಾರವೇ ಮುಕ್ತಾಯಗೊಳಿಸಿತ್ತು. ಆದರೆ ಸಂಜಯ್‌ದತ್ ಹಾಗೂ ಆತನ ಮೂವರು ಸಹವರ್ತಿಗಳ ಶಿಕ್ಷೆ ಏನೆಂಬುದರ ನೀರ್ಪನ್ನು ಇಂದಿಗೆ ಕಾದಿರಿಸಿತ್ತು.

ಸರಣಿ ಬಾಂಬ್ ಸ್ಫೋಟದ ಎಲ್ಲಾ 100 ಮಂದಿ ಆರೋಪಿಗಳ ವಿಚಾರಣೆಯನ್ನು ಟಾಡಾ ನ್ಯಾಯಾಲಯ ಪೂರ್ಣಗೊಳಿಸಿ , ಕಾನೂನಿನನ್ವಯ ಅರ್ಹ ಶಿಕ್ಷೆಯನ್ನು ವಿಧಿಸಿದೆ. ಇದೀಗ ಸಂಜಯ್‌ದತ್‌ನ ಶಿಕ್ಷೆ ಏನೆಂಬುದು ಇಂದು ತೀರ್ಪಾಗುವುದರೊಂದಿಗೆ ಕಲಾಪ ಮುಕ್ತಾಯವಾಗಲಿದೆ.

Share this Story:

Follow Webdunia kannada