Webdunia - Bharat's app for daily news and videos

Install App

ಆಡ್ವಾಣಿ ಕಾರ್‌ಕೇಡ್‌ನಿಂದ ಮುಸ್ಲಿಂ ಚಾಲಕರು ಹೊರಗೆ

Webdunia
ಗುರುವಾರ, 16 ಅಕ್ಟೋಬರ್ 2008 (12:11 IST)
ಬಧವಾರ ಅಂತ್ಯಗೊಂಡ ಎಲ್.ಕೆ.ಆಡ್ವಾಣಿಯವರ ಕ್ಯಾಲಿಕಟ್‌ ಭೇಟಿಯ ವೇಳೆಗೆ, ಅವರ ಕಾರ್‌ಕೇಡ್ ಚಾಲಕರಾಗಿದ್ದ ಕೇರಳ ಪೊಲೀಸ್ ಇಲಾಖೆಯ ಇಬ್ಬರು ಮುಸ್ಲಿಂ ಚಾಲಕರನ್ನು ತೆಗೆದು ಹಾಕಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಭದ್ರತಾ ಪಡೆಯ ಪ್ರಧಾನ ತಂಡವೊಂದು ಮಂಗಳವಾರವೇ ಕ್ಯಾಲಿಕಟ್‌ಗೆ ಆಗಮಿಸಿದ್ದು, ಝಡ್ ಪ್ಲಬ್ ಭದ್ರತೆ ಹೊಂದಿರುವ ಆಡ್ವಾಣಿಯವರಿಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲಿಸಿದ್ದು, ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಯಾವುದೇ ಕಾರಣ ನೀಡದೆ ತಮ್ಮನ್ನು ರೋಸ್ಟರ್ ಡ್ಯೂಟಿಯಿಂದ ತೆಗೆದು ಹಾಕಲಾಗಿದೆ ಎಂದು ಆ ಇಬ್ಬರು ಚಾಲಕರು ಹೇಳಿದ್ದಾರೆ.

ಈ ವಿಚಾರವನ್ನು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರೊಂದಿಗೆ ಪ್ರಸ್ತಾಪಿಸಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಇ.ಅಹ್ಮಮದ್ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್ಎಸ್‌ಜಿಯ ಪ್ರಧಾನ ನಿರ್ದೇಶಕ ಜೆ.ಕೆ. ದತ್ ಅವರಿಗೆ ತಿಳಿಸಿರುವುದಾಗಿ, ಗುಪ್ತಾ ಅವರು ಸಚಿವ ಅಹ್ಮದ್‌ರಿಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಕೇರಳ ಸರಕಾರವೂ, ಆಡ್ವಾಣಿ ಭೇಟಿಯ ವೇಳೆಗೆ ಮುಸ್ಲಿಂ ಚಾಲಕರನ್ನು ಕರ್ತವ್ಯದಿಂದ ತೆಗೆದು ಹಾಕಿರುವ ಕ್ರಮವನ್ನು ತನಿಖೆಗೊಳಪಡಿಸಲು ಆದೇಶ ನೀಡಿದೆ. ಇಂಡಿಯನ್ ಮುಸ್ಲಿಂ ಲೀಗ್ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಕ್ರೋಶಕ್ಕೆ ಕಾರಣವಾಗಿದ್ದ ಮಲೆ ಮಹದೇಶ್ವರ ವನ್ಯಧಾಮದ ಹುಲಿಗಳ ಸಾವಿಗೆ ಕಾರಣ ಪತ್ತೆ

ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಅರೆಸ್ಟ್‌

ಮಲೈ ಮಹದೇಶ್ವರನ ವಾಹನ ಹುಲಿಯನ್ನೇ ಕೊಂದವರನ್ನು ಬಿಡಬಾರದು: ವಿಜಯೇಂದ್ರ

ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದರು: ಸಿದ್ದರಾಮಯ್ಯ

ಆಪರೇಷನ್ ಸಿಂಧು: ಇರಾನ್, ಇಸ್ರೇಲ್‌ನಿಂದ 4,400 ಭಾರತೀಯರು ತಾಯ್ನಾಡಿಗೆ

Show comments