Webdunia - Bharat's app for daily news and videos

Install App

ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ 6 ಸಂಸದರ ಉಚ್ಚಾಟನೆ

Webdunia
ಮಂಗಳವಾರ, 11 ಫೆಬ್ರವರಿ 2014 (19:35 IST)
PR
PR
ನವದೆಹಲಿ: ಸೀಮಾಂಧ್ರ ಪರ ಸಂಸತ್ ಸದಸ್ಯರಿಗೆ ಚಾಟಿ ಬೀಸಿರುವ ಕಾಂಗ್ರೆಸ್ ಪಕ್ಷ ಮಂಗಳವಾರ 6 ಮಂದಿ ಲೋಕಸಭೆ ಸದಸ್ಯರನ್ನು ಉಚ್ಚಾಟನೆ ಮಾಡಿದೆ. 6 ಮಂದಿ ಸೀಮಾಂಧ್ರ ಸದಸ್ಯರು ತೆಲಂಗಾಣ ರಚನೆಯನ್ನು ವಿರೋಧಿಸಿ, ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉಚ್ಚಾಟಿಸಿದ ಸಂಸದರು ಸಬಾಂ ಹರಿ, ಹರ್ಷಕುಮಾರ್, ವಿ. ಅರುಣ್ ಕುಮಾರ್, ಎಲ್. ರಾಜಗೋಪಾಲ್, ಸಾಂಬಶಿವ ರಾವ್ ಮತ್ತು ಸಾಯಿ ಪ್ರತಾಪ್. 6 ಸಂಸದರನ್ನು ಉಚ್ಚಾಟಿಸುವ ಎಐಸಿಸಿ ಶಿಸ್ತು ಸಮಿತಿಯ ನಿರ್ಧಾರಕ್ಕೆ ಸೋನಿಯಾ ಅನುಮೋದನೆ ನೀಡಿದರು ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ತೆಲಂಗಾಣ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸುವ ಸುಳಿವು ಸಿಕ್ಕಿದ್ದು, ಸಭಾಂ ಹರಿ ಮತ್ತು ಇತರೆ ಸದಸ್ಯರು ಕೆಲವು ದಿನಗಳ ಹಿಂದೆ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದರು.ಸಂಸದರನ್ನು ಉಚ್ಚಾಟಿಸುವ ನಿರ್ಧಾರದೊಂದಿಗೆ, ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸೇರಿದಂತೆ ಪಕ್ಷದ ಸಂಸದರಿಗೆ ಪ್ರಬಲವಾದ ಸಂದೇಶ ಕಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments