Select Your Language

Notifications

webdunia
webdunia
webdunia
webdunia

ಅರೆಸ್ಟ್ ಮಾಡಿದ್ರೆ ಅನ್ನ ನೀರು ಬಿಡ್ತೀನಿ ಹುಷಾರ್‌ ಎಂದ ಅಸ್ರಮ್ ಬಾಪು

ಅರೆಸ್ಟ್ ಮಾಡಿದ್ರೆ ಅನ್ನ ನೀರು ಬಿಡ್ತೀನಿ ಹುಷಾರ್‌ ಎಂದ ಅಸ್ರಮ್ ಬಾಪು
ಇಂದೋರ್‌ , ಮಂಗಳವಾರ, 27 ಆಗಸ್ಟ್ 2013 (13:11 IST)
PTI
PTI
ಅರೆಸ್ಟ್ ಮಾಡಿದ್ರೆ ನಾನು ಉಪವಾಸ ಮಾಡ್ತೀನಿ. ಅನ್ನ ನೀರು ಏನೂ ಮುಟ್ಟಲ್ಲ ಹುಷಾರ್‌..! ಎಂದು ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವ ಮಾನವ ಅಸರಾಮ್ ಬಾಪು ಹೇಳಿದ್ದಾರೆ. ಅಸ್ರಮ್‌ ಬಾಪು ವಿರುದ್ಧ ಜೋಧ್‌ಪುರ ಪೊಲೀಸರು ನೆನ್ನೆಯಷ್ಟೇ ಸಮನ್ಸ್ ಜಾರಿ ಮಾಡಿ ನಾಲ್ಕು ದಿನದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅಸ್ರಾಮ್ ಬಾಪು ತಮ್ಮ ಜೋಧ್‌ಪುರ್‌ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರಿಗೆ ಸ್ವತಃ ಬಾಲಕಿಯೇ ದೂರು ನೀಡಿದ್ದಳು. ಈ ಸಂಬಂಧ ಜೋಧ್‌ಪುರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಬಾಪುಗೆ ಸಮನ್ಸ್ ಜಾರಿ ಮಾಡಿದ್ದರು.

"ನಾನು ಯಾವುದೇ ತಪ್ಪು ಮಾಡಿಲ್ಲ, ಪೋಲೀಸರನ್ನು ನಾನೇ ಹೋಗಿ ಭೆಟಿ ಮಾಡುತ್ತೇನೆ ಎಂದು ಹೇಳಿದ್ದ ಅಸ್ರಮ್ ಬಾಪು ಇದೀಗ ಉಲ್ಟಾ ಹೊಡೆದಿದ್ದಾರೆ. ಪೋಲೀಸರು ನನ್ನನ್ನು ಬಂಧಿಸಿದ್ರೆ ಅನ್ನ ನೀರು ಬಿಟ್ಟು ಉಪವಸ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ.

Share this Story:

Follow Webdunia kannada