Select Your Language

Notifications

webdunia
webdunia
webdunia
webdunia

ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?

ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?
ಇಂದೋರ್‌ , ಸೋಮವಾರ, 31 ಮಾರ್ಚ್ 2014 (17:48 IST)
ಅಯ್ಯಯ್ಯೋ.. ಏನ್ರಪ್ಪಾ ಇದು? ಥೂ ಥೂ ಥೂ... ಈ ಕಾಮಪುರಾಣಕ್ಕೆ ಬ್ರೇಕ್ ಹಾಕೋದಕ್ಕೆ ಯಾರಿಂದಲೂ ಆಗ್ತಾ ಇಲ್ವಲ್ರಪ್ಪ.. ಇಷ್ಟು ದಿನ ಅಸರಾಮ್ ಬಾಪು ಕಾಮ ಪುರಾಣ, ನಿತ್ಯಾನಂದನ ರಾಸಲೀಲೆಗಳು, ವಿಧಾನಸೌಧದಲ್ಲಿ ’ನೀಲಿ’ ಪುರಾಣಗಳು ಎಲ್ಲಾನೂ ಕೇಳಿ ಆಯ್ತು. ಆದ್ರೆ ಇದೀಗ ಕಾಂಗ್ರೆಸ್‌ ಶಾಸಕನೊಬ್ಬ ಹುಡುಗಿಯ ಎದುರು ಪ್ಯಾಂಟ್‌ ಬಿಚ್ಚಿ ’ತನ್ನದನ್ನು’ ತೋರಿಸಿದ್ದಾನೆ.

ಇಂಥದ್ದೊಂದು ಕಾಮಲೀಲಾ ಪುರಾಣದ ಸಿಡಿಯನ್ನು ವಿಪಕ್ಷದ ನಾಯಕರೊಬ್ಬರು ಬಿಡುಗಡೆ ಮಾಡಿದ್ದಾರೆ. ಆ ಬಿಡುಗಡೆಗೊಂಡ ಸಿಡಿಯಲ್ಲಿ ಕಾಂಗ್ರೆಸ್‌ ಶಾಸಕನೊಬ್ಬ ತನ್ನ ಮೈಮೇಲೆ ಹಾಕಿಕೊಂಡಿದ್ದ ಶರ್ಟ್‌ ಅನ್ನು ಕಳಚಿಹಾಕ್ತಾನೆ. ಅಷ್ಟೆ ಆಗಿದ್ರೆ ಪಾಪ ಸೆಖೆ ಅಗಿತ್ತು ಆಂತ ಅಂದುಕೊಳ್ಳಬಹುದಿತ್ತೇನೋ.. ಆದ್ರೆ, ಇಷ್ಟಕ್ಕೆ ಸುಮ್ಮನಿರದ ಭೂಪ ಹುಡುಗಿಯ ಎದುರಲ್ಲೇ, ತನ್ನ ಪ್ಯಾಂಟ್‌ ಬಿಚ್ಚಿ ಅಕೆಯ ಬಳಿಗೆ ಬೆತ್ತಲೆಯಾಗಿ ಹೋಗ್ತಾನೆ..

PTI
PTI
ಆಕೆಯೂ ಕೂಡ ಅದಾಗಲೇ ಬೆತ್ತಲಾಗಹಿ ನಿಂತಿರ‍್ತಾಳೆ ಸ್ವಾಮಿ..! ಅಲ್ಲಿಂದ ಮುಂದಕ್ಕೆ ಏನಾಯಿತು ಅಂತ ನಮಗೆ ಗೊತ್ತಿಲ್ಲ. ಆದ್ರೆ ಇಂತಹ ದೃಶ್ಯಗಳನ್ನು ಒಳಗೊಂಡಿರುವ ಸಿಡಿಯೊಂದು ವಿರೋಧಪಕ್ಷದ ನಾಯಕರೊಬ್ಬರು ಬಿಡುಗಡೆ ಮಾಡಿದ್ದಾರೆ.

ಅಷ್ಟಕ್ಕೂ ಆ ಸಿಡಿಯಲ್ಲಿ ಇರುವ ಬೆತ್ತಲೆ ಶಾಸಕ ಯರು ಅಂತ ನಿಮಗೆ ಅಚ್ಚರಿ ಆಗ್ತಾ ಇದ್ಯಾ? ಹೀಗೆ ಪ್ಯಾಂಟ್‌ ಬಿಚ್ಚಿ ನಿಂತ ವ್ಯಕ್ತಿ ಇಂದೋರ್‌ ಪ್ರದೇಶದ ಕಾಂಗ್ರೆಸ್‌ ಶಾಸಕ ಸತ್ಯನಾರಾಯಣ ಪಟೇಲ್‌ ಅಂತ ಹೇಳಲಾಗ್ತಿದೆ.

webdunia
PTI
PTI
ಸದ್ಯಕ್ಕೀಗ ಸತ್ಯನಾರಾಯಣ ಪಟೇಲ್ ಅವರದ್ದೇ ರಾಸಲೀಲೆಯ ಸೆಕ್ಸ್‌ ಸಿಡಿಗಳು ಎಂದು ಹೇಳಲಾಗುತ್ತಿರುವ ವಿಡಿಯೋ ತುಣುಕುಗಳು ಇದೀಗ ಎಲ್ಲಾ ಕಡೆ ವೈರಸ್‌ನಂತೆ ಹರಿದಾಡ್ತಾ ಇದೆ. ಪಡ್ಡೆಗಳು ಕೂಡ ಫೋನ್‌ಗಳಲ್ಲಿ ಕದ್ದು ಮುಚ್ಚಿ ನೋಡ್ತಾ ಇದಾರೆ ಅಂತ ಹೇಳ್ತಾರೆ ವಿಪಕ್ಷದ ನಾಯಕರು.

ಆದ್ರೆ ಈ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಸತ್ಯನಾರಾಯಣ ಪಟೇಲ್ " ಸಿಡಿಯಲ್ಲಿ ಇರುವುದು ನಾನಲ್ಲ.. ನನ್ನ ಮುಖಕ್ಕೆ ಮಸಿ ಬಳಿಯಲು ಇಂಥದ್ದೊಂದು ಕೃತ್ಯವನ್ನು ವಿರೋಧಿಗಳು ಮಾಡ್ತಿದಾರೆ. ನನ್ನ ಮುಖವನ್ನು ಬೇರೊಂದು ದೇಹದ ಮುಖಕ್ಕೆ ಹೊಂದಿಕೊಳ್ಳುವಂತೆ ಎಡಿಟಿಂಗ್ ಮಾಡಿದ್ದಾರೆ. ಇದನ್ನು ಎಡಿಟ್‌ ಮಾಡಿದ ವ್ಯಕ್ತಿ ನಿಜಕ್ಕೂ ಬುದ್ದಿವಂತನಾಗಿದ್ದು, ಸ್ಮಾರ್ಟ್‌ ಆಗಿ ಎಲ್ಲಿಯೂ ಗೊತ್ತಾಗದಂತೆ ಕೆಲಸ ಮಾಡಿದ್ದಾನೆ. ಎಂದು ಹೇಳಿದ್ರು.

ಫಾರೆನ್ಸಿಕ್‌ ಲ್ಯಾಬ್‌ ರಿಪೋರ್ಟ್‌ ಏನ್‌ ಹೇಳುತ್ತೆ ಗೊತ್ತಾ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ..

webdunia
PTI
PTI
ಈ ಸೆಕ್ಸ್‌ ಸಿಡಿಯನ್ನು ಈಗಾಗಲೇ ದೆಹಲಿಯ ಫಾರೆನ್ಸಿಕ್‌ ಲ್ಯಾಬ್‌ಗೆ ಕಳಿಸಿಕೊಡಲಾಗಿದ್ದು, ಅದರ ವರದಿಯ ಪ್ರಕಾರ ಇದೊಂದು ನಕಲಿ ವಿಡಿಯೋ ಎಂದು ಗೊತ್ತಾಗಿದೆ ಎಂದು ಸತ್ಯನಾರಾಯಣ ಪಟೇಲ್ ಹೇಳಿದ್ರು. ಅಷ್ಟೇ ಅಲ್ಲ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಯನ್ನು ನೀಡ್ತೀನಿ ಎಂದು ಸತ್ಯನಾರಾಯಣ ಪಟೇಲ್ ಗುಡುಗಿದ್ರು.

ಈ ಬಗ್ಗೆ ಸತ್ಯನಾರಾಯಣ ಪಟೇಲ್ ಅವರು ಪೋಲೀಸರಿಗೆ ದೂರು ನೀಡಿದ ನಂತರ ಒಬ್ಬ ಬಿಕಾಂ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈತನೇ "ವಾಟ್ಸ್‌ ಆಫ್‌" ಮೂಲಕ ಈ ವಿಡಿಯೋಗಳನ್ನು ಎಲ್ಲರಿಗೂ ಹಂಚಿದ್ದಾನೆ ಎಂದು ಪೋಲೀಸರು ಅವನನ್ನು ಬಂಧಿಸಿ ಎಳೆದೊಯ್ದಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ಯನಾರಾಯಣ ಪಟೇಲ್ "ವಿರೋಧಪಕ್ಷಗಳು ನನ್ನ ತೇಜೋವಧೆ ಮಾಡಲು ಇಂತಹ ಕೃತ್ಯಗಳನ್ನು ಮಾಡುತ್ತಿದೆ. ನನ್ನ ಪ್ರಭವದಿಂದ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸೋತು ಹೋಗುತ್ತೇವೆಯೋ ಎಂದು ಅಂಜಿ ಅಲ್ಲಾಡುತ್ತಿದೆ. ಅದಕ್ಕಾಗಿಯೇ ಇಂತಹ ಕೃತ್ಯಕ್ಕೆ ವಿರೋಧ ಪಕ್ಷ ಇಳಿದಿದೆ ಎಂದು ಹೇಳಿದ್ರು.

Share this Story:

Follow Webdunia kannada