ಅಮೇಥಿಯಲ್ಲಿ ಆಮ್ ಆದ್ಮಿ ಜನವಿಶ್ವಾಸ್ ರ್ಯಾಲಿಗೆ ಅಡ್ಡಿ
, ಭಾನುವಾರ, 12 ಜನವರಿ 2014 (13:47 IST)
ಲಖನೌ: ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಅಮೇಥಿಯಲ್ಲಿ ಕೈಗೊಂಡಿರುವ ಜನವಿಶ್ವಾಸ್ ರ್ಯಾಲಿಗೆ ಅಡ್ಡಿಯಾಗಿದೆ. ಜನವಿಶ್ವಾಸ್ ಹೆಸರಿನಲ್ಲಿ ರ್ಯಾಲಿ ಕೈಗೊಂಡಿರುವ ವಿಶ್ವಾಸ್ ಜನರಿಗೆ ತಮ್ಮ ಉದ್ದೇಶ ಮತ್ತು ಯೋಜನೆಗಳನ್ನು ತಿಳಿಸಿ ಮತದಾರರನ್ನು ಸೆಳೆಯಲು ಮುಂದಾಗಿದ್ದರು. ಆದರೆ ಜಗದೀಶ್ಪುರದಲ್ಲಿ ಜನವಿಶ್ವಾಸ್ ರ್ಯಾಲಿಗೆ ಅಡ್ಡಿಪಡಿಸಲಾಯಿತು. ಪ್ರವಾದಿ ಮೊಹಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಕುಮಾರ್ ವಿಶ್ವಾಸ್ ನೀಡಿದ್ದಾರೆಂದು ಜನರು ಕುಮಾರ್ ವಿಶ್ವಾಸ್ ಪ್ರತಿಕೃತಿ ದಹಿಸಿ ವಿರೋಧ ವ್ಯಕ್ತಪಡಿಸಿದರು. ರ್ಯಾಲಿಗೆ ಕಾಂಗ್ರೆಸ್ ಮತ್ತು ಎಸ್ಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ವಂಶಪಾರಂಪರ್ಯ ರಾಜಕಾರಣ ಅಂತ್ಯಗೊಳ್ಳಬೇಕಿರುವುದರಿಂದ ತಾವು ಅಮೇಥಿ ಕ್ಷೇತ್ರದಲ್ಲಿ ನಿಲ್ಲುವುದಾಗಿ ವಿಶ್ವಾಸ್ ಹೇಳಿದ್ದರು. ಎಸ್ಪಿ ಅಮೇಥಿಯಲ್ಲಿ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದೇ ರಾಹುಲ್ ಗೆಲುವಿಗೆ ಬೆಂಬಲಿಸಿದೆ. ತಾವೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಸ್ಪರ್ಧಿಸುತ್ತಿದ್ದು, ಈ ಹೋರಾಟದಲ್ಲಿ ಗೆಲ್ಲುವ ವಿಶ್ವಾಸವನ್ನು ಕುಮಾರ್ ವಿಶ್ವಾಸ್ ವ್ಯಕ್ತಪಡಿಸಿದ್ದಾರೆ.