ಲೈಂಗಿಕ ಕಿರುಕುಳ ನೀಡಿ ಮಾಜಿ ಉದ್ಯೋಗಿಯ ಸಾವಿಗೆ ಕಾರಣನಾದ ಆರೋಪಿ ಪ್ರಿನ್ಸಿಪಾಲ್ ನನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂಬೇಡ್ಕರ್ ಕಾಲೇಜಿನ ಪ್ರಿನ್ಸಿಪಾಲ್ ಜಿಕೆ ಅರೋರಾ, ಕಾಲೇಜಿನ ಪ್ರಯೋಗಶಾಲೆಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆ ಮಾಹಿತಿ ಬಹಿರಂಗಪಡಿಸಿದ್ದರಿಂದ ಸೇವೆಯಿಂದ ವಜಾಗೊಳಿಸಲಾಗಿತ್ತು.
ಕಳೆದ ಎರಡು ವಾರಗಳ ಹಿಂದೆ 40 ವಯಸ್ಸಿನ ಪವಿತ್ರಾ ದೆಹಲಿ ಸರಕಾರದ ಕೇಂದ್ರ ಕಚೇರಿಯ ಹೊರಗಡೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಳು ಸಾಯಿವ ಮುನ್ನ ಆತ್ಮಹತ್ಯೆ ಪತ್ರದಲ್ಲಿ ನನ್ನ ಸಾವಿಗೆ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ ನೀಡಿದ್ದೇ ಕಾರಣ ಎಂದು ಆರೋಪಿಸಿದ್ದಳು.
ಮಾಜಿ ಉದ್ಯೋಗಿಯ ಸಾವಿನ ನಂತರ ಕಾಲೇಜಿನ ಶಿಕ್ಷಕರು, ಸಿಬ್ಬಂದಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಆರೋಪಿ ಪ್ರಾಂಶುಪಾಲ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.