ನಗರದಲ್ಲಿ ನಡೆದ ಕೋಮುಗಲಭೆಯಲ್ಲಿ ದುಷ್ಕರ್ಮಿಗಳು ನನ್ನ ಮಗನ ಕುತ್ತಿಗೆಗೆ ಕತ್ತಿ ಹಿಡಿದು ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಕೋಮುಗಲಭೆಯಲ್ಲಿ ಸಂತ್ರಸ್ಥಳಾದ 26 ವರ್ಷ ವಯಸ್ಸಿನ ಯುವತಿ ಹೇಳಿಕೆ ನೀಡಿದ್ದಾಳೆ.
ಗ್ರಾಮದ ಹೊರವಲಯದಲ್ಲಿ ಪತಿಯೊಂದಿಗೆ ಸೇರಿ ಹೊಸ ಮನೆಯನ್ನು ಕಟ್ಟಿಸಲಾಗಿತ್ತು. ನಗರದಲ್ಲಿ ನಡೆದ ಹಿಂದು ಮತ್ತು ಮುಸ್ಲಿಂ ಸಮುದಾಯದ ಕೋಮುಗಲಭೆಯಿಂದಾಗಿ ಹೊಸ ಮನೆಯನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುವ ಅನಿವಾರ್ಯತೆ ಎದುರಾಗಿದೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾಳೆ.
ಕೋಮುಗಲಭೆ ನಡೆದಾಗ ಮನೆಯಿಂದ ಪಾರಾಗಲು ಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಮೂವರು ಆರೋಪಿಗಳು ಮನೆಯೊಳಗೆ ನುಗ್ಗಿ ನನ್ನ ಎರಡು ವರ್ಷದ ಮಗುವಿನ ಕುತ್ತಿಗೆಗೆ ಕತ್ತಿ ತೋರಿಸಿ ಬೆದರಿಸಿ ಹತ್ತಿರದ ಹೊಲದಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದರು.
ಆರೋಪಿಗಳು ಅತ್ಯಾಚಾರವೆಸಗುವಾಗ ನಾನು ಕೂಗಲಿಲ್ಲ. ಯಾಕೆಂದರೆ ಕೂಗಿದಲ್ಲಿ ಮಗುವಿನ ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ಒಂದು ವೇಳೆ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಪತಿಗೆ ಗೊತ್ತಾದಲ್ಲಿ ನನ್ನನ್ನು ತೊರೆಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾಳೆ.
ಪೊಲೀಸರು ಆರೋಪಿಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಮನೆಯಲ್ಲಿರುವದಕ್ಕಿಂತ ನಿರಾಶ್ರಿತ ಶಿಬಿರದಲ್ಲಿರುವುದೇ ನೆಮ್ಮದಿ ತರುತ್ತದೆ ಎಂದು ಯುವತಿ ತನ್ನ ಮನದಾಳವನ್ನು ಬಹಿರಂಗಪಡಿಸಿದ್ದಾಳೆ.