Select Your Language

Notifications

webdunia
webdunia
webdunia
webdunia

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇವರು ಶ್ರೀರಾಮನ ಅವತಾರ: ರಾಜನಾಥ್ ಸಿಂಗ್

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇವರು ಶ್ರೀರಾಮನ ಅವತಾರ: ರಾಜನಾಥ್ ಸಿಂಗ್
ರಾಂಚಿ , ಸೋಮವಾರ, 30 ಡಿಸೆಂಬರ್ 2013 (16:59 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇವರು ಶ್ರೀರಾಮನ ಅವತಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೋಲಿಸಿದ್ದಾರೆ.

ರಾಮಾಯಣದಲ್ಲಿ ಶ್ರೀರಾಮನು ಅಯೋಧ್ಯೆಯ ರಾಜನಾಗಬಾರದು ಎನ್ನುವ ಉದ್ದೇಶದಿಂದ ಮಂಥರೆ ರೂಪಿಸಿದ ಸಂಚಿನಂತೆ, ಇದೀಗ ಮೋದಿ ಪ್ರಧಾನಿಯಾಗಬಾರದು ಎಂದು ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಆದರೆ, ಮಂಥರೆಯ ಸಂಚಿನ ಮಧ್ಯೆಯೂ ದೇವರು ಶ್ರೀ ರಾಮ ಅಯೋಧ್ಯೆಯ ರಾಜನಾದ. ಅದರಂತೆ, ನರೇಂದ್ರ ಮೋದಿ ಕೂಡಾ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ನರೇಂದ್ರ ಮೋದಿ ವಿರುದ್ಧ ಸಂಚು ನಡೆದಷ್ಟು ಪ್ರಭಾವಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada