Webdunia - Bharat's app for daily news and videos

Install App

ಕಾಂಗ್ರೆಸ್‌ನತ್ತ ಒಲವು ತೋರಿದ ಕರುಣಾನಿಧಿ

Webdunia
ಗುರುವಾರ, 20 ಜೂನ್ 2013 (14:57 IST)
PTI
ಜೂ.27ರಂದು ತಮಿಳುನಾಡಿನ ರಾಜ್ಯಸಭಾ ಸ್ಥಾನಕ್ಕೆ ನಡೆಯಲಿರುವ ದ್ವೆ„ವಾರ್ಷಿಕ ಚುನಾವಣೆಯಲ್ಲಿ ಕನಿಮೊಳಿ ಆಯ್ಕೆಗೆ ಡಿಎಂಕೆ ಉದ್ದೇಶಿಸಿದ್ದು, ಬೆಂಬಲ ನೀಡುವಂತೆ ಕಾಂಗ್ರೆಸ್‌ ಬಾಗಿಲು ತಟ್ಟಿದೆ.

ಈ ಸಂಬಂಧ ಹಿರಿಯ ಡಿಎಂಕೆ ಮುಖಂಡ ಟಿ.ಆರ್‌.ಬಾಲು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿಯಾಗಿ ಬೆಂಬಲಿಸುವಂತೆ ಮನವಿ ಮಾಡಿದರು.

ಆದರೆ ಕನಿಮೊಳಿಯವರನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್‌ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಡಿಎಂಕೆ-ಕಾಂಗ್ರೆಸ್‌ ಭೇಟಿ ಮುನ್ನ ನಟ ವಿಜಯಕಾಂತ್‌ ಅವರು ಡಿಎಂಡಿಕೆ ಪಕ್ಷದ ಶಾಸಕರು, ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ನ್ನು ಕೇಳಿದ್ದರು.

ಈ ಮಧ್ಯೆ ಕನಿಮೊಳಿಯವರಿಗೆ ಬೆಂಬಲ ನೀಡುವುದಾಗಿ ಎಂಎಂಕೆಯ ಇಬ್ಬರು ಶಾಸಕರು ಘೋಷಿಸಿದ್ದಾರೆ.

ತಮಿಳುನಾಡು ರಾಜ್ಯಸಭೆಯ ಒಟ್ಟು 6 ಸ್ಥಾನಗಳಲ್ಲಿ 4 ಸ್ಥಾನಕ್ಕೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಭ್ಯರ್ಥಿಗಳನ್ನು ನಿಲ್ಲಿಸಲು ಉದ್ದೇಶಿಸಿದ್ದು, ಒಂದು ಸ್ಥಾನಕ್ಕೆ ಸಿಪಿಐನ ಡಿ.ರಾಜ ಅವರನ್ನು ಬೆಂಬಲಿಸಲು ಉದ್ದೇಶಿಸಿದೆ. 6ನೇ ಸ್ಥಾನಕ್ಕೆ ಡಿಎಂಡಿಕೆ ಮತ್ತು ಡಿಎಂಕೆ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿದ್ದು ಕಾಂಗ್ರೆಸ್‌ ಬೆಂಬಲದ ಮೇಲೆ ಭವಿಷ್ಯ ನಿಂತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments