Select Your Language

Notifications

webdunia
webdunia
webdunia
webdunia

ಆಮ್‌ ಆದ್ಮಿ, ಕಾಂಗ್ರೆಸ್ ಪಕ್ಷದ ಒಳಒಪ್ಪಂದ: ಸಾಕ್ಷ್ಯಾಧಾರ ಬಹಿರಂಗಪಡಿಸಿ ಗಡ್ಕರಿಗೆ ಆಪ್ ಸವಾಲ್

ಆಮ್‌ ಆದ್ಮಿ, ಕಾಂಗ್ರೆಸ್ ಪಕ್ಷದ ಒಳಒಪ್ಪಂದ: ಸಾಕ್ಷ್ಯಾಧಾರ ಬಹಿರಂಗಪಡಿಸಿ ಗಡ್ಕರಿಗೆ ಆಪ್ ಸವಾಲ್
ನವದೆಹಲಿ , ಸೋಮವಾರ, 30 ಡಿಸೆಂಬರ್ 2013 (14:28 IST)
PTI
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸಲು ಕಾಂಗ್ರೆಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಸಾಕ್ಷ್ಯಾಧಾರಗಳಿದ್ರೆ ಸಾಬೀತುಪಡಿಸಲಿ ಅದನ್ನು ಬಿಟ್ಟು ಕೇವಲ ಬೊಗಳೆ ಬಿಡಬಾರದು ಎಂದು ಆಮ್ ಆದ್ಮಿ ಪಕ್ಷದ ಸಚಿವ ಮನೀಷ್ ಸಿಸೋಡಿಯಾ ಕಿಡಿಕಾರಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ನಡೆದ ಒಳಒಪ್ಪಂದದಲ್ಲಿ ಬಾಗಿಯಾಗಿರುವ ಮುಖಂಡರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.

ಒಳಒಪ್ಪಂದದಲ್ಲಿ ಭಾಗಿಯಾದ ಮುಖಂಡರ ಹೆಸರು ಮತ್ತು ಯಾವ ಹೋಟೆಲ್‌ನಲ್ಲಿ ಒಪ್ಪಂದವಾಯಿತು ಎನ್ನುವ ಬಗ್ಗೆ ಬಹಿರಂಗಪಡಿಸಿದಲ್ಲಿ ನಮಗೆ ಪಕ್ಷದ ಮುಖಂಡರನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವದೆಹಲಿಯ ಬಿಜೆಪಿ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ, ಆಮ್ ಆದ್ಮಿ ಪಕ್ಷ ಕಾಂಗ್ರೆಸ್‌ನೊಂದಿಗೆ ಸೇರಿ ಸರಕಾರ ರಚಿಸಲು ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು.

Share this Story:

Follow Webdunia kannada