ನಿರ್ಮಾಣ: ಹಿಮಾಂಶು ಎಚ್, ಶಾಹ, ಚಿರಾಗ್ ಶಾ, ವರುಣ್ ಖನ್ನಾ, ತರುಣ್ ಅರೋರಾ
ಕಥೆ, ಸಂವಾದ ಮತ್ತು ನಿರ್ದೇಶನ: ವರುಣ್ ಖನ್ನಾ
ಸಂಗೀತ: ಅಬು ಮಲ್ಲಿಕ್
ಕಲಾವಿದರು: ವಿ.ಜೆ. ಗೌರವ್ ಕಪೂರ್, ಹರ್ಷಿತಾ ಭಟ್, ವ್ರಜೇ್ ಹಿರಜಿ, ಜಾಕೀರ್ ಹುಸೈನ್, ಪರಮಿತ ಸೆಟಿ, ಲಲಿತ್ ಮೋಹನ್ ತಿವಾರಿ, ಗೋವಿಂದ ನಾಮದೇವ್, ಅರ್ಚನಾ ಪೂರನ್ಸಿಂಹ
ಗೋವಿಂದ (ಗೌರವ ಕಪೂರ್) ದುರದೃಷ್ಟಪೀಡಿತ. ಅವನ ಭಾಗ್ಯದಲ್ಲಿ ಭಗವಂತ ಯಾವುದೇ ಒಳಿತನ್ನು ಬರೆದಿಲ್ಲವೇನೊ ಅನಿಸುವಂತೆ, ಅವರು ಕೊಟ್ಟಿಗೆ ಪ್ರವೇಶಿಸಿದರೆ ದನ ಹಾಲು ಕೊಡುವುದನ್ನು ನಿಲ್ಲಿಸಿಬಿಡುತ್ತದೆ. ಅವರು ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ಒಳ್ಳೆಯ ಹಾಲಿನಿಂದ ತಯಾರಿಸಿದ ಚಹಾ ಕೆಟ್ಟುಹೋಗುತ್ತದೆ. ಆತ ಎಲ್ಲೇ ಅಲ್ಲೆಲ್ಲಾ ಅವನ ಕೆಟ್ಟ ಅದೃಷ್ಟ ಹಿಂಬಾಲಿಸುತ್ತದೆ.
ಟಿವಿ ಚಾನೆಲ್ ಒಂದರಲ್ಲಿ ಉದ್ಯೋಗಸ್ಥೆಯಾಗಿರುವ ಮಮತಾ( ಅರ್ಚನಾ) ಗೋವಿಂದರನ್ನು ದೆಹಲಿಯಿಂದ ಮುಂಬಯಿಗೆ ಕರೆತರುತ್ತಾರೆ. ಮುಂಬಯಿಗೆ ಬಂದ ನಂತರ ಗೋವಿಂದರೊಂದಿಗೆ ಆನೇಕ ಹಾಸ್ಯಸ್ಪದ ಘಟನೆಗಳು ಘಟಿಸಲು ಆರಂಭವಾಗುತ್ತದೆ.
ಗೋವಿಂದನ ಭೇಟಿ ಆರು ಜನ ಭೂಗತ ದೊರೆಗಳು (ಗೋವಿಂದ ನಾಮ್ದೇವ್, ಪರಮಿತ ಸೆಟಿ, ವ್ರಜೇಶ್ ಹಿರಜಿ, ಲಲಿತ ಮೋಹನ್ ತಿವಾರಿ, ಜಾಕೀರ್ ಹುಸೈನ್ ಮತ್ತು ಗಣೇಶ್ ಯಾದವ್) ಮತ್ತು ಒರ್ವ ಸುಂದರ ನರ್ಸ್ (ಹರ್ಷಿತಾ ಭಟ್) ಅವರೊಂದಿಗೆ ಆಗುತ್ತದೆ.
ಗೋವಿಂದನ ಜೀವನದಲ್ಲೂ ರೊಮಾನ್ಸ್ ಮಾಡುವ ಸಂದರ್ಭ ಬರುತ್ತದೆ ಮತ್ತು ಅವನು ಸಕಾರತ್ಮಕ ಯೋಚನೆಗಳನ್ನು ಮಾಡತೊಡಗುತ್ತಾನೆ. ಈ ಚಿತ್ರ ಹಾಸ್ಯಭರಿತವಾಗಿದೆ.