ನಿರ್ಮಾಣ: ರಮೇಶ್ ಸಿಪ್ಪಿ, ಮುಖೇಸ್ ತಲ್ರೆಜಾ, ರೋಹನ್ ಸಿಪ್ಪಿನಿರ್ದೇಶನ: ನಿಖಿಲ್ ಅಡ್ವಾಣಿಸಂಗೀತ: ಶಂಕರ್-ಎಸಾನ್-ಲಾಯ್ಕಲಾವಿದರು: ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣ್ವೀರ್ ಶೌರಿ, ಮಿಥುನ್ ಚಕ್ರವರ್ತಿ, ಗಾರ್ಡನ್ ಲಿಯೊ.ಸಿದ್ದು(ಅಕ್ಷಯ್ ಕುಮಾರ್) ದಿಲ್ಲಿಯ ಚಾಂದಿನ ಚೌಕ್ನ ಹೋಟೆಲ್ ಒಂದರಲ್ಲಿ ತರಕಾರಿ ಕತ್ತರಿಸುವವನಾಗಿರುತ್ತಾನೆ ಮತ್ತು ಆತನಿಗೆ ತನ್ನ ಈ ರೀತಿಯ ಜೀವನದಿಂದ ಸಂತೋಷವಿರುವುದಿಲ್ಲ. ಆತ ದೊಡ್ಡ ದೊಡ್ಡ ಕನಸು ಕಂಡಿರುತ್ತಾನೆ. ಪರಿಶ್ರಮ ಪಡದೆಯೇ ಶಾರ್ಟ್ಕಟ್ನಲ್ಲಿ ಯಶಸ್ಸು ಪಡೆಯಲು ಅವನು ಬಯಸುತ್ತಾನೆ. ಜೋತಿಷ್ಯಿಗಳು, ಸಾಧು ಸಂತರಲ್ಲಿ ಅವನು ತನ್ನ ಅದೃಷ್ಟ ಒಲಿಯುವ ದಿನಾಂಕದ ಬಗ್ಗೆ ಪ್ರಶ್ನಿಸುತ್ತಿರುತ್ತಾನೆ. ಅವನಿಗೆ ಸ್ವಂತ ಪರಿಶ್ರಮದಲ್ಲಿ ನಂಬಿಕೆ ಇರುವುದಿಲ್ಲ.ದಾದಾ(ಮಿಥುನ್ ಚಕ್ರವರ್ತಿ) ಸಿದ್ದುಗೆ ತಂದೆಯ ಸಮಾನ. ಅವರು ಯಾವಾಗಲೂ ಸಿದ್ದುಗೆ ವ್ಯರ್ಥ ವಿಷಯಗಳ ಕಡೆ ಗಮನ ಕೊಡುವುದನ್ನು ಬಿಟ್ಟು ಪರಿಶ್ರಮ ಪಡುವಂತೆ ಹೇಳುತ್ತಲೇ ಇರುತ್ತಾರೆ ಆದರೆ ಸಿದ್ದು ಅದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಾನೆ.ಈ ನಡುವೆ ಒಂದು ದಿನ ಸಿದ್ದು ಬಹಳ ವರ್ಷಗಳಿಂದ ಕಾಯುತ್ತಿದ್ದ ಕ್ಷಣ ಒದಗಿ ಬರುತ್ತದೆ. ಚೀನಾದಿಂದ ಬಂದ ಇಬ್ಬರು ಅಪರಿಚಿತರು ಸಿದ್ದುವಿಗೆ ಅವನು ಹಿಂದಿನ ಜನ್ಮದಲ್ಲಿ ಚೀನಾದ ಬಹುದೊಡ್ಡ ಯೋಧನಾಗಿದ್ದುದಾಗಿ ಮತ್ತು ಈಗ ಅವನು ಮರುಜನ್ಮ ತಳೆದುದ್ದಾಗಿ ಹೇಳುತ್ತಾರೆ. ಅವರು ಸಿದ್ದುವನ್ನು ಚೀನಾಗೆ ಕರೆದೊಯ್ಯಲು ಬಯಸುತ್ತಾರೆ. ಇದರಿಂದ ಸಿದ್ದು ತುಂಬಾ ಖುಷಿಯಾಗುತ್ತಾನೆ ಮತ್ತು ತರಕಾರಿ ಕತ್ತರಿಸುವ ಕೆಲಸದಿಂದ ತನಗೆ ಮುಕ್ತಿ ಸಿಕ್ಕುತ್ತದೆ ಎಂದು ಯೋಚಿಸುತ್ತಾನೆ. ಅವನಿಗೆ ದುಬಾರಿ ಬೆಲೆಯ ಮದ್ಯ ಮತ್ತು ಸುಂದರ ಸ್ತ್ರೀಯರ ಕನಸುಗಳು ಬೀಳತೊಡಗುತ್ತವೆ. ಭಾರತೀಯ ಮತ್ತು ಚೀನೀ ಭಾಷೆಗಳೆರಡನ್ನು ಬಲ್ಲ ರಣ್ವೀರ್ ಶೌರಿಗೆ ಅವರು ಸಿದ್ದುವನ್ನು ಮೂರ್ಖನನ್ನಾಗಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದೂ ಚೀನೀಯರಿಗೆ ಸಹಾಯ ಮಾಡುತ್ತಾನೆ. ಕ್ರೂರ ಸ್ಮಗ್ಲರ್ ಹೊಜೊ(ಗಾರ್ಡನ್ ಲಿಯೊ)ನಿಂದ ತಮ್ಮ ಗ್ರಾಮವನ್ನು ರಕ್ಷಿಸಿಕೊಳ್ಳಲು ಸಿದ್ದುವನ್ನು ಕರೆದೊಯ್ಯಲು ಚೀನೀಯರು ಬಯಸಿರುತ್ತಾರೆ.ಚೀನಾಗೆ ಪ್ರಯಾಣಿಸುತ್ತಿರುವ ಸಂದರ್ಭ ಸಿದ್ದು ಸಖಿಯನ್ನು(ದೀಪಿಕಾ ಪಡುಕೋಣೆಯನ್ನು) ಭೇಟಿಯಾಗುತ್ತಾನೆ. ಸಖಿ ಟೆಲಿ ಶಾಪರ್ಸ್ ಮೀಡಿಯಾದಲ್ಲಿ ಉದ್ಯೋಗದಲ್ಲಿರುತ್ತಾಳೆ ಮತ್ತು ತನ್ನ ಜನ್ಮಭೂಮಿಗೆ ಹೋಗುತ್ತಿರುತ್ತಾಳೆ.
ಚೀನಾ ತಲುಪಿದ ನಂತರ ಸಿದ್ದುವನ್ನು ಹೊಜೊನೊಂದಿಗೆ ಹೋರಾಡಲು ಕಳುಹಿಸಲಾಗುತ್ತದೆ. ಹೊಜೊ ಶಕ್ತಿಶಾಲಿಯಾಗಿರುತ್ತಾನೆ ಮತ್ತು ಸಿದ್ದು ಅದೃಷ್ಟವಶಾತ್ ಅವನ ದಾಂಡಿಗರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾನೆ.
ಸಿದ್ದು ಹೊಜೊ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಬಯಸುತ್ತಾನೆ ಮತ್ತು ಇದಕ್ಕಾಗಿ ಅವನು ಕುಂಗ್ ಫೂ ಕಲಿಯುತ್ತಾನೆ. ಕೊನೆಗೆ ಸಿದ್ದು ತನ್ನ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗುತ್ತಾನೆ.