ಊರಿನ ಸ್ಮಶಾನಕ್ಕೆ ಬೇಲಿಯೇ ಇರಲಿಲ್ಲ. ಯೋಚಿಸಿದ ಊರಿನ ಮುಖ್ಯಸ್ಥರು ಗುಂಡನನ್ನು ಕರೆದು, 'ನೋಡು, ನಮ್ಮೂರಿನ ಸ್ಮಶಾನಕ್ಕೆ ಬೇಲಿಯೇ ಇಲ್ಲ. ನೀವೆಲ್ಲಾ ಸೇರಿ ಮನಸ್ಸು ಮಾಡಿದರೆ ಒಂದು ಬೇಲಿ ನಿರ್ಮಿಸುವುದು ಕಷ್ಟವೇನಲ್ಲ' ಎಂದರು.
' ಅಲ್ಲಾ ಸ್ವಾಮಿ.. ಒಳಗೆ ಹೋದವರು ಹೊರಕ್ಕೆ ಬರಕ್ಕಾಗಲ್ಲ.. ಹೊರಗಿದ್ದವರಂತೂ ಸಾಯದೆ ಒಳಗೆ ಹೋಗಕ್ಕಾಗಲ್ಲ. ಮತ್ಯಾಕೆ ಬೇಲಿ?' ಎಂದು ಸಕತ್ ಗೊಂದಲಕ್ಕೆ ಬಿದ್ದಿದ್ದ ಗುಂಡ ಕೊನೆಗೂ ಉತ್ತರಿಸಿದ..!