Webdunia - Bharat's app for daily news and videos

Install App

ತಲಕಾವೇರಿ

Webdunia
ಶನಿವಾರ, 22 ನವೆಂಬರ್ 2014 (14:01 IST)
ದಕ್ಷಿಣದ ಗಂಗೆ ಎಂದು ಕರೆಸಿಕೊಳ್ಳುವ ಕನ್ನಡ ನಾಡಿನ ಜೀವನದಿ ಲಿಕಾವೇರಿಳಿಯ ಉಗಮ ಸ್ಥಳವಿದು. ಮಡಕೇರಿ ತಾಲೋಕು ಭಾಗಮಂಡಲದಿಂದ 8 ಕಿ. ಮೀ ದೂರವಿದೆ. ಕಾಲು ಹಾದಿ ಮೂಲಕ ಈ ಸ್ಥಳಕ್ಕೆ ಹೋಗಬಹುದು. ವಾಹನ ಸೌಕರ್ಯವೂ ಇದೆ. ಪ್ರಕೃತಿ ಪ್ರಿಯರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಒಂದು. ಎತ್ತರದಲ್ಲಿರುವ ಈ ಪ್ರದೇಶದಲ್ಲಿ ನಿಂತು ನೋಡಿದರೆ, ಬಾನಿನಿಂದ ಭುವಿ ನೋಡಿದ ಅನುಭವ ಆಗುತ್ತದೆ.
 
ಸ್ಥಳ ಮಹಿಮೆ: ಇಲ್ಲಿ ಅಗಸ್ತ್ಯ ಋುಷಿ ಸ್ಥಾಪಿಸಿದ ಎನ್ನಲಾದ ಅಗಸ್ತ್ಯೇಶ್ವರ ದೇವಾಲಯ ಮತ್ತು ಗಣಪತಿ ದೇವಾಲಯಗಳಿವೆ. ಇಲ್ಲಿಂದ ಕೂಗಳತೆಯ ತಗ್ಗಿನಲ್ಲಿ ಕಾವೇರಿ ಉದ್ಭವಿಸುವ ಸ್ಥಳವಿದೆ. ಅಲ್ಲಿ ಚಚ್ಚೌಕ ಆಕಾರದ ಒಂದು ಕೊಳ ಅಥವಾ ಕಲ್ಯಾಣಿಯೊಂದನ್ನು ಕಟ್ಟಲಾಗಿದೆ. ಈ ಕೊಳವನ್ನು ಲಿಕುಂಡಿಗೆಳಿ ಎಂದು ಕರೆಯುತ್ತಾರೆ. ಇಲ್ಲಿಂದ ಕಾವೇರಿ ಆರಂಭವಾಗುತ್ತದೆ. ಅದರ ಬಳಿ ಸ್ನಾನಕ್ಕಾಗಿ ವಿಶಾಲವಾದ ಕೊಳವಿದೆ. ತುಲಾ ಸಂಕ್ರಮಣದ ದಿವಸ ಒಂದು ನಿಶ್ಚಿತ ಸಮಯಕ್ಕೆ ಕಾವೇರಿ ಉಕ್ಕಿ ಹರಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ.
 
ಅಂದು ಜನ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಸ್ನಾನ ಮಾಡಿ ಪಾವನರಾಗುತ್ತಾರೆ. ಈ ಕೋಳದಲ್ಲಿ ಸ್ನಾನ ಮಾಡುವುದೆಂದರೆ, ಗಂಗಾ ಉತ್ತರ ಭಾರತದ ಗಂಗಾ ನದಿಯಲ್ಲಿ ಮಿಂದಷ್ಟೇ ಪವಿತ್ರ ಎಂಬ ಭಾವನೆ ಇದೆ. ಕಾವೇರಿಯು ಬ್ರಹ್ಮಗಿರಿ ಎಂಬ ಬೆಟ್ಟದಲ್ಲಿ ಹುಟ್ಟುತ್ತದೆ. ಇದು ಸುಮಾರು 300 ಅಡಿ ಎತ್ತರದ ಬೆಟ್ಟ. ಸಪ್ತರ್ಷಿಗಳು ಇಲ್ಲಿ ಹೋಮ ಮಾಡಿದ್ದರು ಎಂಬ ಪ್ರತೀತಿ ಇದೆ. ಬೆಟ್ಟದ ಗಿರಿ ಮೇಲೆ ನಿಂತರ ನೀಲಗಿರಿ, ಕುದುರೆಮುಖ, ಕರಾವಳಿ, ಕೆಳಗೆ ಹರಿಯುವ ನದಿಗಳು, ಅರಭಿಸಮುದ್ರ ಎಲ್ಲವೂ ಚೆನ್ನಾಗಿ ಕಾಣುತ್ತವೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

Show comments