Webdunia - Bharat's app for daily news and videos

Install App

ಕುಮಾರಸ್ವಾಮಿ ಹೆಸರಿನಲ್ಲೇ ಯೂ ಟರ್ನ್ ಇದೆ, ನನ್ನ ಬೆಳೆಸಿರೋದು ಆದಿಚುಂಚನಗಿರಿ ಸ್ವಾಮಿಗಳು: ಜಮೀರ್ ಅಹ್ಮದ್

Krishnaveni K
ಶನಿವಾರ, 16 ನವೆಂಬರ್ 2024 (12:39 IST)
ಬೆಂಗಳೂರು: ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಕರಿಯಾ ಕುಮಾರಸ್ವಾಮಿ ಎಂದು ಕರೆದಿದ್ದಕ್ಕೆ ಸ್ಪಷ್ಟನೆ ನೀಡಿದ್ದ ಜಮೀರ್ ಅಹ್ಮದ್ ಗೆ ಕುಮಾರಸ್ವಾಮಿಯೇ ತಿರುಗೇಟು ನೀಡಿದ್ದರು. ಇದಕ್ಕೀಗ ಜಮೀರ್ ಪ್ರತಿಕ್ರಿಯಿಸಿದ್ದು ಅವರು ಯೂ ಟರ್ನ್ ಕುಮಾರಸ್ವಾಮಿ ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿಯವರನ್ನು ಕರಿಯಾ ಎಂದು ಜಮೀರ್ ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಜಮೀರ್, ನಾನು ಅವರನ್ನು ಕರಿಯಾ ಅಂತಿದ್ದೆ, ಅವರು ನನ್ನ ಕುಳ್ಳ ಅಂತಿದ್ದರು ಅದರಲ್ಲೇನಿದೆ ಎಂದಿದ್ದರು.

ಆದರೆ ಈ ಬಗ್ಗೆ ನಿನ್ನೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಎಚ್ ಡಿ ಕುಮಾರಸ್ವಾಮಿ, ನಾನು ಅವರನ್ನು ಕುಳ್ಳ ಎಂದು ಕರೆಯುತ್ತಲೇ ಇರಲಿಲ್ಲ ಎಂದಿದ್ದರು. ಇದಕ್ಕೆ ಇಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ‘ಅವರ ಹೆಸರೇ ಯೂ ಟರ್ನ್ ಕುಮಾರಸ್ವಾಮಿ. ಅವರು ಸುಳ್ಳು ಹೇಳುತ್ತಿದ್ದಾರೆ. ಆದರೆ ನಾನು ಸತ್ಯವನ್ನೇ ಹೇಳೋದು. ಅವರು ನನ್ನನ್ನು ಹಾಗೇ ಕರೆಯುತ್ತಿದ್ದರು’ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಇನ್ನು, ತಮ್ಮ ಹೇಳಿಕೆಯಿಂದ ಚನ್ನಪಟ್ಟಣದಲ್ಲಿ ಒಕ್ಕಲಿಗರ ಮತ ಕಾಂಗ್ರೆಸ್ ಗೆ ವಿರುದ್ಧವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಖಂಡಿತಾ ಇಲ್ಲ. ನನ್ನ ಹೇಳಿಕೆ ಇದ್ದಿದ್ದು ಕೇವಲ ಕುಮಾರಸ್ವಾಮಿಯವರಿಗೆ ವೈಯಕ್ತಿಕವಾಗಿ. ನಾನು ಒಕ್ಕಲಿಗರ ಬಗ್ಗೆ ಹೇಳಿಯೇ ಇಲ್ಲ. ನಾನು ಜನತಾದಳಕ್ಕೆ ಬರಲು ಕಾರಣನೇ ಆದಿಚುಂಚನಗಿರಿ ದೊಡ್ಡ ಸ್ವಾಮೀಜಿಗಳು. ನಾನು ಅವರ ಮಠದಲ್ಲೇ ಬೆಳೆದವನು. ಇದು ಕುಮಾರಸ್ವಾಮಿಯವರಿಗೂ ಗೊತ್ತಿದೆ ಕೇಳಿ ಅವರನ್ನು. ನನ್ನ ಪಕ್ಷಕ್ಕೆ ಕರೆಸಿರೋದೂ ದೊಡ್ಡ ಸ್ವಾಮಿಯವರೇ’ ಎಂದು ಜಮೀರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments