Select Your Language

Notifications

webdunia
webdunia
webdunia
webdunia

ಇಬ್ಬರ ಜಗಳ ಬಿಡಿಸಲು ಹೋದ ಯುವಕನಿಗೆ ಡ್ಯಾಗರ್ ನಿಂದ ಇರಿದು ಹತ್ಯೆ

ಇಬ್ಬರ ಜಗಳ ಬಿಡಿಸಲು ಹೋದ ಯುವಕನಿಗೆ ಡ್ಯಾಗರ್ ನಿಂದ ಇರಿದು ಹತ್ಯೆ
ಬೆಂಗಳೂರು , ಭಾನುವಾರ, 28 ಫೆಬ್ರವರಿ 2016 (11:10 IST)
ನಗರದ ಡಿ.ಜೆ ಹಳ್ಳಿ ಪ್ರದೇಶದಲ್ಲಿ ಇಬ್ಬರ ಜಗಳ ಬಿಡಿಸಲು ಹೋದ ಹತ್ಯೆಯಾದ ಯುವಕನೊಬ್ಬ ಹತ್ಯೆಗೀಡಾದ ಹೇಯ ಘಟನೆ ವರದಿಯಾಗಿದೆ.
 
ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಸುಹೈಬ್ ಖಾನ್, ಎರಡು ಗುಂಪುಗಳನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದಾನೆ. ಆದರೆ, ಇದರಿಂದ ಆಕ್ರೋಶಗೊಂಡ ಶಾಬಾಜ್ ಖಾನ್ ಎಂಬಾತ ಡ್ಯಾಗರ್ ನಿಂದ ಸುಹೈಬ್‌ಗೆ ಇರಿದಾಗ ಸುಹೈಬ್ ಗಂಭೀರವಾಗಿ ಗಾಯಗೊಂಡಿದ್ದಾನೆ.
 
ಗಂಭೀರವಾಗಿ ಗಾಯಗೊಂಡ ಸುಹೈಬ್ ಖಾನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ
 
ಸುಹೈಬ್ ಮೇಲೆ ಶಾಬಾಜ್ ಖಾನ್ ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆರೋಪಿ ಶಾಬಾಜ್ ಹಾಗೂ ಇತರರ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada