ನೀರಾವರಿ ಕೆಲಸ ಮಾಡಿಕೊಟ್ಟರೆ ಬೆಳ್ಳಿಯಲ್ಲಿ ತೂಗುತ್ತೇವೆ ಎಂದು ಹೇಳಿದ್ದೀರಿ. ಆದರೆ, ಬೆಳ್ಳಿಯಲ್ಲಿ ತೂಗಲಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಬಸವನಗೌಡ ಯಾತ್ನಾಳ್ಗೆ ಚಟಾಕಿ ಹಾರಿಸಿದರು.
ನಾನು ನಿಮ್ಮನ್ನು ಬೆಳ್ಳಿಯಲ್ಲಿ ತೂಗೋಣ ಅಂತಲೇ ಇದ್ದೆ ಆದರೆ, ಅಷ್ಟರಲ್ಲಿಯೇ ನನ್ನನ್ನು ಪಕ್ಷದಿಂದ ಹೊರಹಾಕಿದ್ರಿ ಎಂದು ಬಸವನಗೌಡ ಯಾತ್ನಾಳ ತಿರುಗೇಟು ನೀಡಿದರು.
ಬಸವನಗೌಡ ಯಾತ್ನಾಳ್ ಅವರೇ ನಿಮ್ಮನ್ನು ಪಕ್ಷದಿಂದ ಯಾಕೆ ಹೊರಗೆ ಹಾಕಿದ್ದು ಎನ್ನುವುದು ನಿಮಗೆ ಗೊತ್ತಿದೆ ಎಂದು ಈಶ್ವರಪ್ಪ ಮರುಬಾಣ ಎಸೆದರು.
ನೀವು ಪ್ರಾಮಾಣಿಕ ರಾಜಕಾರಣಿಯಾಗಿದ್ದರಿಂದ ನಿಮ್ಮನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸುವ ಕುರಿತಂತೆ ರಾಜ್ಯ ಸಮಿತಿಯಲ್ಲಿ ಚರ್ಚೆಯಾಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸಂತೈಸಿದರು.