Webdunia - Bharat's app for daily news and videos

Install App

ಕಾಂಗ್ರೆಸ್ಸಿಗರು ಸುಲಭವಾಗಿ ಸಿಎಂ ಆಗಲು ಬಿಡೋಲ್ಲ: ಡಿಕೆಶಿ ಪರ ದೇವೇಗೌಡರ ಬ್ಯಾಟಿಂಗ್

Webdunia
ಶನಿವಾರ, 2 ಸೆಪ್ಟಂಬರ್ 2017 (15:49 IST)
ನಿಮ್ಮನ್ನು ಮುಂದೆ ಬರಲು ಬಿಡೋಲ್ಲ. ಪರೋಕ್ಷವಾಗಿ ಕಾಂಗ್ರೆಸ್‌ನಲ್ಲಿ ನಿಮ್ಮನ್ನು ತುಳಿಯಲಾಗುತ್ತದೆ ಎನ್ನುವ ಸೂಚನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ನೀಡಿದ್ದಾರೆ.
ನಾವೆಲ್ಲಾ ಎರಡನೇ ದರ್ಜೆಯವರು. ನಮ್ಮನ್ನು ಮೊದಲಿನ ಸ್ಥಾನಕ್ಕೆ ಬರಲು ಬಿಡುವುದಿಲ್ಲ. ಇದನ್ನು ನಾನೆಲ್ಲಾ ಅನುಭವಿಸಿಯೇ ಹೇಳುತ್ತಿದ್ದೇನೆ. ಅಷ್ಟು ಸುಲಭವಾಗಿ ನಿಮ್ಮನ್ನು ಸಿಎಂ ಆಗಲು ಬಿಡುತ್ತಾರೆ ಎಂದ್ಕೋಬೇಡಿ. ನಮಗೆ ನಾವೇ ಮುಂದೆ ಬರಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
 
ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಡಿ.ಕೆ.ಶಿವಕುಮಾರ್‌ ದೇವೇಗೌಡರ ಹಿತನುಡಿಗಳನ್ನು ಕೇಳಿ ಅವರಿಗೆ ನಮಸ್ಕರಿಸಿ ಮುಗಳ್ನಕ್ಕ ಘಟನೆ ನಡೆಯಿತು.
 
ನನ್ನ ಜೀವನದ ಕೊನೆಯ ಅವಧಿಯಲ್ಲಿ ಒಕ್ಕಲಿಗರ ಬಗ್ಗೆ ಯೋಚಿಸುತ್ತಿದ್ದೇನೆ. ಕಾವೇರಿ ಕಣಿವೆಯ ಎರಡು ಕೋಟಿ ಜನತೆಯ ಬಗ್ಗೆ ಯೋಚಿಸುತ್ತಿದ್ದೇನೆ. ಎಲ್ಲರು ಸೇರಿ ಪ್ರಯತ್ನಿಸಿ ನಮ್ಮ ರೈತರಿಗೆ ನ್ಯಾಯ ಕೊಡಿಸೋಣ ಎಂದರು.
 
 ನಾನು ಒಕ್ಕಲಿಗ ಪರ, ಇತರ ಸಮುದಾಯಗಳ ವಿರೋಧಿ ಎಂದು ಮೊದಲಿನಿಂದಲೂ ಬಿಂಬಿಸಲಾಗುತ್ತಿದೆ. ನಾನು ಯಾವ ಸಮುದಾಯದ ವಿರೋಧಿಯೂ ಅಲ್ಲ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments