Select Your Language

Notifications

webdunia
webdunia
webdunia
webdunia

ಅಧಿವೇಶನದಲ್ಲಿ ಸಿಂಹ ಘರ್ಜನೆ ಮಾಡಿ: ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಕರೆ

ಅಧಿವೇಶನದಲ್ಲಿ ಸಿಂಹ ಘರ್ಜನೆ ಮಾಡಿ: ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಕರೆ
ಬೆಂಗಳೂರು , ಶನಿವಾರ, 2 ಜುಲೈ 2016 (16:54 IST)
ಬಿಜೆಪಿ ವಿಪಕ್ಷದಲ್ಲಿರುವುದರಿಂದ ಸರಕಾರದ ತಪ್ಪು ಕೆಲಸಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಅಧಿವೇಶನದ ಸಂದರ್ಭದಲ್ಲಿ ಯಾವುದೇ ಕೆಲಸದ ನೆಪಹೇಳಿ ಸದನಕ್ಕೆ ಗೈರುಹಾಜರಾಗುವುದು ಶೋಭೆ ತರೋಲ್ಲ. ಜನತೆ ಸದನದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಳುಹಿಸಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು.
 
ವಿಧಾನಪರಿಷತ್ ಸದಸ್ಯರು, ಶಾಸಕರು ಸರಕಾರದ ತಪ್ಪು ಕೆಲಸಗಳ ವಿರುದ್ಧ ಸಿಂಹಘರ್ಜನೆ ಮಾಡಬೇಕಾಗಿದೆ. ಪ್ರತಿಯೊಂದರಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರಕಾರ ಯಾವಾಗ ಹೋಗುತ್ತದೆಯೋ ಎಂದು ಜನತೆ ನಿರೀಕ್ಷಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. 
 
ಸರಕಾರದ ಒಂದೊಂದು ತಪ್ಪುಗಳನ್ನು ಎತ್ತಿಹಿಡಿದು ಜನತೆಯ ಮುಂದಿಡಿ. ಮತದಾರರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್,ಯಡಿಯೂರಪ್ಪ ಗುಡುಗಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಿಜೆಪಿ ಕಾರ್ಯಕ್ರಮಗಳಿಗೆ ಹೈಕಮಾಂಡ್ ಮೆಚ್ಚುಗೆ: ಮಾಜಿ ಸುರೇಶ್ ಕುಮಾರ್