"ಬರ" ದಲ್ಲೂ ಭಿನ್ನಮತ: ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ರಾಜ್ಯ ಪ್ರವಾಸ

Webdunia
ಶನಿವಾರ, 13 ಮೇ 2017 (19:23 IST)
ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ "ಬರ" ದಲ್ಲೂ ಭಿನ್ನಮತ ಉಲ್ಬಣಿಸಿದೆ. ಇದೀಗ ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಮೇ 10 ರವರೆಗೆ ಪದಾಧಿಕಾರಿಗಳ ಬಿಕ್ಕಟ್ಟು ಪರಿಹರಿಸುವಂತೆ ಈಶ್ವರಪ್ಪ, ಯಡಿಯೂರಪ್ಪಗೆ ಮನವಿ ಮಾಡಿದ್ದರು. ಆದರೆ. ಬಿಕ್ಕಟ್ಟು ಪರಿಹರಿಸದಿರುವುದರಿಂದ ಮತ್ತೆ ಮುನಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೇ 18 ರಿಂದ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಪ್ರವಾಸದಲ್ಲಿ ಈಶ್ವರಪ್ಪ ಜೊತೆಯಾಗುವುದು ಅನುಮಾನವಾಗಿದೆ ಎನ್ನಲಾಗುತ್ತಿದೆ. 
 
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮೇ 15 ರಿಂದ ಮೇ 17 ರವರೆಗೆ ಉತ್ತರ ಕರ್ನಾಟಕದಲ್ಲಿ ಬರ ಅಧ್ಯಯನ ನಡೆಸಲಿದ್ದು, ವಿಜಯಪುರ, ರಾಯಚೂರು, ಕೊಪ್ಪಳ, ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. 
 
ಮೇ 18 ರಂದು ಆರಂಭವಾಗಲಿರುವ ಬಿಎಸ್‌ವೈ ನೇತೃತ್ವದ ರಾಜ್ಯ ಪ್ರವಾಸಕ್ಕೆ ತೆರಳಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

40,000 ಆದಾಯ ಎಂದು ಹೇಗೆ ಹೇಳಿದ್ರಿ, ಬಡವರ ಅವಕಾಶ ಹೇಗೆ ಕಿತ್ಕೊಂಡ್ರಿ: ಕೆಪಿಎಸ್ ಸಿ ಕರ್ಮಕಾಂಡ ಬೆಂಡೆತ್ತಿದ ಹೈಕೋರ್ಟ್ ಜಡ್ಜ್ Video

ದೆಹಲಿಯಲ್ಲಿಂದು ಕರ್ನಾಟಕ ಸಚಿವ ಸಂಪುಟ ಬಿಸಿ ಬಿಸಿ ಚರ್ಚೆ: ರಾಹುಲ್ ಗಾಂಧಿ ಲಿಸ್ಟ್ ನಲ್ಲಿರುವ ಸಂಭಾವ್ಯರು ಇವರೇ

ಥ್ಯಾಂಕ್ಯೂ ದೇವ್ರೇ... ನಡು ರಸ್ತೆಯಲ್ಲಿ ನಿಂತು ರೈತ ಮಾಡಿದ ಕೆಲಸಕ್ಕೆ ನೆಟ್ಟಿಗರ ಸಲಾಂ Video

ಸಿಜೆಪಿ ಹೇಳಿದ ತಕ್ಷಣ ಕೇಂದ್ರ ಸರ್ಕಾರ ಪ್ರತಿಭಟನಾಕಾರರ ಮೇಲೆ ಕೇಸ್ ಹಿಂಪಡೆಯಬೇಕಾ: ಕಾನೂನು ಏನು ಹೇಳುತ್ತದೆ

ಆಗಸ್ಟ್ 1 ರಂದು ಪ್ರಧಾನಿ ಮೋದಿ ಮೈಸೂರಿಗೆ, ಇಲ್ಲಿದೆ ಕಾರಣ

ಮುಂದಿನ ಸುದ್ದಿ
Show comments