Webdunia - Bharat's app for daily news and videos

Install App

ಮಹಿಳೆಯನ್ನು ಮುಂಬೈಗೆ ಮಾರಾಟ ಮಾಡಿದ ಆರೋಪಿಗೆ ಥಳಿತ

Webdunia
ಶನಿವಾರ, 13 ಸೆಪ್ಟಂಬರ್ 2014 (11:10 IST)
ಮಹಿಳೆಯೊಬ್ಬರನ್ನು ಮುಂಬೈ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ ಆರೋಪ ಮೇಲೆ ಚಂದ್ರು ಎಂಬವನಿಗೆ ಮಹಿಳೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನದ ಕೋರಹಳ್ಳಿಯಲ್ಲಿ ನಡೆದಿದೆ.  ಆರೋಪಿ ಚಂದ್ರುಗೆ ಇಸ್ತ್ರಿಪೆಟ್ಟಿಗೆಯಿಂದ ಬರೆ ಹಾಕಿದ ಸಂಬಂಧಿಕರು ನಂತರ ಚೆನ್ನಾಗಿ ಥಳಿಸಿದ್ದಾರೆ.  ಕಳೆದ 3 ದಿನಗಳಿಂದ ಗ್ರಾಮದ ಮಹಿಳೆ ನಾಪತ್ತೆಯಾಗಿದ್ದಳು.

ಆರೋಪಿ ಚಂದ್ರು ಸಂಬಂಧಿ ಆಟೋದಲ್ಲಿ ಕರೆದೊಯ್ದಿದ್ದ. ಮಹಿಳೆಯನ್ನು ಆಟೋದಲ್ಲಿ ಕರೆದೊಯ್ದಿದ್ದನ್ನು ಗ್ರಾಮಸ್ಥರು ನೋಡಿದ್ದರು. ಆರೋಪಿ ಚಂದ್ರು ಸಂಬಂಧಿ ಜೊತೆ ಸೇರಿ ಮಹಿಳೆಯನ್ನು ಮಾರಾಟ ಮಾಡಿದ್ದಾನೆಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದರು.

ಇದರಿಂದ ತೀವ್ರ ಸಿಟ್ಟಿಗೆದ್ದಿದ್ದ ಗ್ರಾಮಸ್ಥರು ಚಂದ್ರುವನ್ನು ಹಿಡಿದು ಚೆನ್ನಾಗಿ ಥಳಿಸಿದ್ದರಿಂದ ಗಾಯಗೊಂಡ ಚಂದ್ರುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಮನೆಯನ್ನು ಕೂಡ ಮಹಿಳೆಯ ಸಂಬಂಧಿಕರು ಧ್ವಂಸಗೊಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments