Select Your Language

Notifications

webdunia
webdunia
webdunia
webdunia

ನೈಜೀರಿಯಾ ವಿದ್ಯಾರ್ಥಿಯ ಹುಚ್ಚಾಟಕ್ಕೆ ಮಹಿಳೆ ಬಲಿ: ನಿವಾಸಿಗಳ ಪ್ರತಿಭಟನೆ

ನೈಜೀರಿಯಾ ವಿದ್ಯಾರ್ಥಿಯ ಹುಚ್ಚಾಟಕ್ಕೆ ಮಹಿಳೆ ಬಲಿ: ನಿವಾಸಿಗಳ ಪ್ರತಿಭಟನೆ
ಬೆಂಗಳೂರು: , ಸೋಮವಾರ, 1 ಫೆಬ್ರವರಿ 2016 (11:09 IST)
ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯ ಆಚಾರ್ಯ ಕಾಲೇಜು ಹಾಗೂ ಸಪ್ತಗಿರಿ ಕಾಲೇಜು ಬಳಿ ನೈಜೀರಿಯಾ ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಮಹಿಳೆಯೊಬ್ಬರು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಕಾಲೇಜಿನ ಬಳಿ ಪ್ರತಿಭಟನೆ ನಡೆಸಿದ್ದಾರೆ.

ನೈಜೀರಿಯಾ ವಿದ್ಯಾರ್ಥಿಗಳು ಮದ್ಯಸೇವಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಶಬಾನಾ ತಾಜ್ ಎಂಬ ಮಹಿಳೆ ಗಣಪತಿನಗರದಲ್ಲಿ ಸಾವನ್ನಪ್ಪಿದ್ದರು.  ರಸ್ತೆಯಲ್ಲಿ ಪತಿ ಜತೆ ನಡೆದುಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದರು.

ಕಾಲೇಜಿನಲ್ಲಿ ನಿಯಮಬಾಹಿರವಾಗಿ ನಡೆದುಕೊಳ್ಳುವ , ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು. ಈ ಕುರಿತು ಕಾಲೇಜಿನ ಆಡಳಿತ ಮಂಡಳಿ ಅಶಿಸ್ತಿನ ವರ್ತನೆ ತೋರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. 

Share this Story:

Follow Webdunia kannada