Select Your Language

Notifications

webdunia
webdunia
webdunia
webdunia

ಕೂಡ್ಲಿಗಿಯಲ್ಲಿ ಮಹಿಳೆಯ ರೇಪ್, ಹತ್ಯೆ ಪ್ರಕರಣ: ಆರೋಪಿಯ ಗುರುತು ಪತ್ತೆ

ಕೂಡ್ಲಿಗಿಯಲ್ಲಿ ಮಹಿಳೆಯ  ರೇಪ್, ಹತ್ಯೆ ಪ್ರಕರಣ: ಆರೋಪಿಯ ಗುರುತು ಪತ್ತೆ
ಕೂಡ್ಲಿಗಿ , ಗುರುವಾರ, 24 ಜುಲೈ 2014 (10:05 IST)
ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಕೊಟ್ಟೂರಿನಲ್ಲಿ ವಿಕೃತ ಕಾಮಿಯ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.  ಬಸವರಾಜ್ (45) ಎಂಬಾತ ಮಹಿಳೆಯನ್ನು ರೇಪ್ ಮತ್ತು ಹತ್ಯೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.  

ನಾಪತ್ತೆಯಾದ ಬಸವರಾಜ್‌ಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕೂಡ್ಲಿಗಿ ತಾಲೂಕಿನ ಕೊಟ್ಟೂರು ಲಾಡ್ಜ್‌ನಲ್ಲಿ ಮಹಿಳೆಯನ್ನು ಕರೆದುತಂದು ಇರಿಸಿದ್ದ ಬಸವರಾಜ್ ಬೆಳಿಗ್ಗೆ ಕೋಣೆಯಿಂದ ಹೊರಬಿದ್ದಿದ್ದ. ನಂತರ ಲಾಡ್ಜ್ ಸಿಬ್ಬಂದಿ ಕೋಣೆಯ ಬಾಗಿಲು ತೆರೆದುನೋಡಿದಾಗ ಮಹಿಳೆ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಮಹಿಳೆಯ ಶವವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದಾಗ ರೇಪ್ ಮಾಡಿ ಕೊಂದಿರುವುದು ಬೆಳಕಿಗೆ ಬಂದಿತ್ತು.

ಅಂಕಮ್ಮನಾಳಕ್ಕೆ ಸೇರಿದ ಈ  ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಬಸವರಾಜು ಮಹಿಳೆಯ ಮುಖ, ಕೈ, ಗುಪ್ತಾಂಗಕ್ಕೆ ಫೆವಿಕ್ವಿಕ್ ಅಂಟಿಸಿದ್ದ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದನೆಂದು ಹೇಳಲಾಗುತ್ತಿದೆ.
 

Share this Story:

Follow Webdunia kannada