ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ

Webdunia
ಭಾನುವಾರ, 12 ಮಾರ್ಚ್ 2023 (14:34 IST)
ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ ನಡೆದಿದೆ.ಪುಷ್ಪ ಎಂಬಾಕೆ ಸಂಪತ್ ಎಂಬಾತನನ್ನು ಎರಡನೇ ಮದುವೆ ಆಗಿದ್ದಳು.ಕಳೆದ ಒಂದು ವರ್ಷದ ಹಿಂದೆ ಪುಷ್ಪ ಮದುವೆ ಆಗಿದ್ದಳು. ಆಕೆಯ ಮೊದಲ ಪತಿಗೆ ಎರಡು ಮಕ್ಕಳಿದ್ದರು.ಆ ಮಕ್ಕಳ ಪೈಕಿ ಮೊದಲ ಮಗು ಚೇತನ್ ನನ್ನು ಸಂಪತ್ ಹತ್ಯೆ ಮಾಡಿದ್ದಾನೆ.
 
ಪುಷ್ಪ ಮತ್ತು ಸಂಪತ್ ನಡುವೆ ಗಲಾಟೆ ನಡೆದಿದೆ.ಪತ್ನಿ ಜೊತೆಗೆ ಬೇರೆ ಸಂಬಂದ ಇರಬಹುದು ಎಂದು ಗಲಾಟೆ ಮಾಡ್ತಿದ್ದ.ಈ ಕಾರಣಕ್ಕೆ ಎರಡನೇ ಪತಿ ಯಿಂದ ಪುಷ್ಪ ದೂರವಾಗಿದ್ದಳು.ಹೀಗಾಗಿ ಪುಷ್ಪ ಮೇಲೆ ಸಂಪತ್ ಕೋಪ ಮಾಡಿಕೊಂಡಿದ್ದ. ಪುಷ್ಪ ಮಗುವನ್ನು ಬಾಗಲೂರಿನ ವಸತಿ ಶಾಲೆಯಲ್ಲಿ ಇರಿಸಿದ್ದಳು.ಕಳೆದ ಫೆಬ್ರವರಿ ಇಪ್ಪತ್ತರಂದು  ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿದ್ದ.ಹೊಸಕೋಟೆ ಬಳಿಯಲ್ಲಿ ಬಿರಿಯಾನಿ ಕೊಡಿಸಿದ್ದ.ನಂತ್ರ ಪುಷ್ಪಗೆ ಕರೆ ಮಾಡಿದ್ದ, ಪುಷ್ಪ ಸ್ಪಂದಿಸದೆ ಇದ್ದಾಗ  ಮಗುವನ್ನ ಸಂಪತ್ ಕೊಲೆ ಮಾಡಿದ.ಪುಷ್ಪ ಮೇಲಿನ ಕೋಪಕ್ಕೆ ಕೊಲೆ ಮಾಡಿ ಕೆ ಜಿ ಎಫ್ ಬಳಿಯ ಕ್ಯಾಸಂಬಳ್ಳಿಯ ರಾಮಪುರ ಕೆರೆಗೆ ಆರೋಪಿ ಸಂಪತ್ ಬಿಸಾಕಿದ್ದ.ನಂತರ ಸಂಪತ್ ನನ್ನು ಪ್ರಶ್ನೆ ಮಾಡಲು ಹೋದಾಗ ಅತ್ಮಹತ್ಯೆ ಯತ್ನ ಮಾಡಿದ್ದ‌.ವಿಷ ಕುಡಿದು ಅಸ್ಪತ್ರೆಗೆ ದಾಖಲಾಗಿದ್ದ.ಈಗ ಸಂಪತ್ ಗುಣಮುಖ ವಾದ ಬಳಿಕ ಕೊಲೆ ಮಾಡಿದ್ದು ಬೆಳಕಿಗೆ ಬಂದಿದ್ದು,ಬಾಗಲೂರು  ಪೊಲೀಸರಿಂದ ಆರೋಪಿ ಸಂಪತ್ ನನ್ನ  ಅರೆಸ್ಟ್ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸಿಎಂ ಬದಲಾವಣೆಗೆ ಬಿಗ್ ಟ್ವಿಸ್ಟ್: ರಾಜೀನಾಮೆಗೆ ಸಿದ್ದರಾಮಯ್ಯ ನಿರ್ಧಾರ?

ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ: ದೆಹಲಿಗೆ ಸಿದ್ದು, ಡಿಕೆಶಿನ ಕರೆಸಿಕೊಂಡಿದ್ದು ಈ ಕಾರಣಕ್ಕೆ ಅಂತೆ

ಗಡಿ ಸುರಕ್ಷಿತವಾಗಿರುವಲ್ಲಿ ಪುರುಷರಿಗಿಂತ ಮಹಿಳೆಯರದ್ದೆ ಹೆಚ್ಚು ಪಾಲು: ಅಮಿತ್ ಶಾ ಶ್ಲಾಘನೆ

Rain Alert: ಕರಾವಳಿ ಮೀನುಗಾರರಿಗೆ ವಿಶೇಷ ಸೂಚನೆ ಕೊಟ್ಟ ಇಲಾಖೆ

FIFA ವರ್ಲ್ಡ್ ಕಪ್ 2026: ಭಾರತದಿಂದ ಆಯ್ಕೆಯಾದ ಮೊದಲ ಛಾಯಾಗ್ರಾಹಕಿ ಇವರೇ

ಮುಂದಿನ ಸುದ್ದಿ
Show comments