Select Your Language

Notifications

webdunia
webdunia
webdunia
webdunia

ಪತ್ನಿ ಶೀಲ ಶಂಕಿಸಿ ಹತ್ಯೆ: ಆರೋಪಿ ಪತಿಯ ಬಂಧನ

ಪತ್ನಿ ಶೀಲ ಶಂಕಿಸಿ ಹತ್ಯೆ: ಆರೋಪಿ ಪತಿಯ ಬಂಧನ
ಬೆಂಗಳೂರು , ಶನಿವಾರ, 27 ಜೂನ್ 2015 (14:55 IST)
ಪತ್ನಿಯನ್ನು ಪತಿಯೇ ಹತ್ಯೆಗೈದು ಕಳೆದು ಹೋಗಿದ್ದಾಳೆ ಹುಡುಕಿಕೊಂಡು ಕೊಡಿ ಎಂದು ದೂರು ದಾಖಲಿಸಿದ್ದ ಆರೋಪಿಯೋರ್ವನನ್ನು ನಗರ ಪೊಲೀಸರು ಇಂದು ಬಂಧಿಸಿದ್ದಾರೆ. 
 
ಬಂಧಿತ ಆರೋಪಿಯನ್ನು ಅಶೋಕ್(35) ಎಂದು ಹೇಳಲಾಗಿದ್ದು, ತನ್ನ ಪತ್ನಿ ಮೀನಾಕ್ಷಿ(30)ಯ ಶೀಲ ಶಂಕಿಸಿ ತಾನೇ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. 
 
ಏನಿದು ಪ್ರಕರಣ?: 
ದಂಪತಿಗಳಿಬ್ಬರೂ ಚಿಕ್ಕಬಳ್ಳಾಪುರ ಮೂಲದವರಾಗಿದ್ದು, ಇಬ್ಬರೂ ಕೂಡ ನಗರದ ಎಸ್ಟೇಟ್‌ವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಮೀನಾಕ್ಷಿಯ ಚಲನವಲನದ ಬಗ್ಗೆ ಪತಿ ಅಶೋಕ್‌ಗೆ ಅನುಮಾನ ಮೂಡಿದೆ. ಆದ್ದರಿಂದ ಪತ್ನಿಯನ್ನು ತಾನೇ ಹತ್ಯೆಗೈದು ಕಾರ್ಯ ನಿರ್ವಹಿಸುತ್ತಿದ್ದ ತೋಟದಲ್ಲಿಯೇ ಹೂತು ಹಾಕಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಕೌಟುಂಬಿಕ ಕಲಹವೂ ನಡೆಯುತ್ತಿತ್ತು ತಿಳಿದು ಬಂದಿದೆ.  
 
ಇನ್ನು ಹತ್ಯೆಗೈದ ಪತಿಯೇ ನಗರದ ಯಲಹಂಕ ಠಾಣೆಗೆ ತರಳಿ ತನ್ನ ಪತ್ನಿ ಕಳೆದು ಹೋಗಿದ್ದಾಳೆ ಹುಡುಕಿಕೊಂಡಿ ಎಂದು ಕಳೆದ ಐದು ದಿನಗಳ ಹಿಂದೆ ದೂರು ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಮುಂದುವರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Share this Story:

Follow Webdunia kannada