ಬೆಂಗಳೂರು: ತನ್ನ ಮಗಳ ಪ್ರಿಯಕರನಿಂದ ಪತಿಯ ಕೊಲೆಯನ್ನು ಪತ್ನಿ ಉಷಾರಾಣಿ ಎಂಬವರೇ ಮಾಡಿಸಿದ ದಾರುಣ ಘಟನೆ ವರದಿಯಾಗಿದೆ. ಕೊಲೆ ಮಾಡಿದ ನಂತರ ತಮ್ಮ ಪತಿ ಕಾಣೆಯಾಗಿದ್ದಾರೆಂದು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ್ನೇಯ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದಾಗ ಸ್ವತಃ ಪತ್ನಿಯೇ ಪತ್ನಿಯನ್ನು ಕೊಲೆ ಮಾಡಿಸಿರುವುದು ಬಹಿರಂಗವಾಗಿದೆ.
ಮಾ. 21ರಂದು ನಡೆದ ಕೊಲೆ ಪ್ರಕರಣದಲ್ಲಿ ತನ್ನ ಮಗಳ ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿದ್ದಳು. ಪತಿಯು ತನ್ನ ಪುತ್ರಿಯ ಪ್ರೇಮವಿವಾಹಕ್ಕೆ ತೀವ್ರವಾಗಿ ವಿರೋಧಿಸಿದ್ದರಿಂದ ಪತಿ ಮುನಿರಾಜು ಎಂಬವರನ್ನು ಕೊಲೆ ಮಾಡಿಸಲು ಪತ್ನಿ ಉಷಾರಾಣಿ ಸಂಚು ಹೂಡಿದಳು.
ಈ ಘಟನೆಗೆ ಸಂಬಂಧಿಸಿದಂತೆ ಮಹೇಶ್(24) ಮತ್ತು ಸುರೇಶ್ ಎಂಬಿಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.