Webdunia - Bharat's app for daily news and videos

Install App

ಪತಿಗೆ ಡ್ರಗ್ಸ್ ತಿನಿಸುತ್ತಿದ ಪತ್ನಿ

Webdunia
ಭಾನುವಾರ, 6 ಫೆಬ್ರವರಿ 2022 (14:56 IST)
ಕಳೆದ 6 ವರ್ಷಕ್ಕೂ ಹೆಚ್ಚು ಕಾಲ ಪತಿಯ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ​ ಆರೋಪದಡಿಯಲ್ಲಿ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಕೊಟ್ಟಾಯಂನಲ್ಲಿ ಬಂಧಿಸಿದ್ದು, ಪ್ರಕರಣ ಕುರಿತು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ.
 
ಬಂಧಿತ ಮಹಿಳೆಯನ್ನು ಪಲಾ ನಿವಾಸಿ ಆಶಾ ಸುರೇಶ್​ (36) ಎಂದು ಗುರುತಿಸಲಾಗಿದೆ.
ತಿರುವನಂತಪುರಂ ಮೂಲದ ಸತೀಶ್​ (38) ಜತೆ 2006ರಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಪಲಾದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ಸತೀಶ್​ ತನ್ನ ಬಿಜಿನೆಸ್​ನಲ್ಲಿ ತುಂಬಾ ಹೋರಾಟ ನಡೆಸಬೇಕಾಯಿತು. ಯಾವಾಗ ಐಸ್​ ಕ್ರೀಮ್​ ವ್ಯವಹಾರವನ್ನು ಶುರು ಮಾಡಿದರೂ ಸತೀಶ್​ ಜೀವನ ಕೂಡ ಬದಲಾಯಿತು. ಒಳ್ಳೆಯ ಲಾಭ ದೊರೆತಿದ್ದರಿಂದ 2012ರಲ್ಲಿ ಸತೀಶ್​ ಪಲಕ್ಕಾಡ್​ನಲ್ಲಿ ಒಂದು ಮನೆಯನ್ನು ಖರೀದಿಸಿದರು.
 
ಪೊಲೀಸರ ಪ್ರಕಾರ ಪತ್ನಿ ಆಶಾ, ಕ್ಷುಲ್ಲಕ ಕಾರಣಗಳಿಗೆ ಪತಿಯೊಂದಿಗೆ ಆಗಾಗ ಕ್ಯಾತೆ ತೆಗೆಯುತ್ತಿದ್ದಳಂತೆ. ಇದರ ನಡುವೆ ಸಮಯ ಕಳೆದಂತೆ ಸತೀಶ್​ ತನ್ನ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸಿದ್ದಾರೆ. ಹೆಚ್ಚು ಸುಸ್ತು ಮತ್ತು ಸಂಕಟವಾಗುವುದನ್ನು ಕಂಡ ಸತೀಶ್​ ವೈದ್ಯರನ್ನು ಸಂಪರ್ಕಿಸುತ್ತಾರೆ. ಕಡಿಮೆ ಸಕ್ಕರೆ ಮಟ್ಟವೇ ನಿಮ್ಮ ಆರೋಗ್ಯ ಏರುಪೇರಿಗೆ ಕಾರಣ ಎಂದು ಪರೀಕ್ಷಿಸಿದ ವೈದ್ಯರು ತಿಳಿಸುತ್ತಾರೆ. ಬಳಿಕ ಔಷಧಿ ತೆಗೆದುಕೊಂಡರು ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ.
 
2021ರ ಸೆಪ್ಟೆಂಬರ್​​ ತಿಂಗಳಲ್ಲಿ ಸತೀಶ್​ ಮನೆಯಲ್ಲಿ ಊಟವುದನ್ನು ಕೆಲ ದಿನಗಳ ತಪ್ಪಿಸಿದಾಗ ಆರೋಗ್ಯ ಸುಧಾರಿಸುತ್ತಿರುವುದನ್ನು ಗಮನಿಸುತ್ತಾರೆ. ಇದಾದ ಬಳಿಕ ಆತನ ಪತ್ನಿಯ ಗೆಳತಿಯನ್ನು ಭೇಟಿ ಮಾಡಿ ಊಟದಲ್ಲಿ ಏನಾದರೂ ಬೆರಸಿ ಕೊಡುತ್ತಿದ್ದಾಳಾ ಒಮ್ಮೆ ನೋಡಿ ಹೇಳಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸ್ನೇಹಿತೆಯೊಂದಿಗೆ ಮಾತನಾಡುವಾಗ ಆಶಾ ಎಲ್ಲವನ್ನು ಬಾಯಿ ಬಿಡುತ್ತಾಳೆ. ಪ್ರತಿದಿನ ಊಟದಲ್ಲಿ ಡ್ರಗ್ಸ್​ ಬೆರೆಸುತ್ತಿರುವುದಾಗಿ ಹೇಳುತ್ತಾಳೆ. ಅಲ್ಲದೆ, ಮೆಡಿಸಿನ್​ನ ಫೋಟೋವನ್ನು ಕೂಡ ಸ್ನೇಹಿತೆಗೆ ರವಾನಿಸುತ್ತಾಳೆ. ಇದಾದ ಬಳಿಕ ಸತೀಶ್​ಗೆ ಪತ್ನಿಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಬಳಿಕ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿ ಪತ್ನಿಯ ಕೃತ್ಯವಿರುವ ದೃಶ್ಯದ ಸಮೇತ ಪೊಲೀಸ್​ ಠಾಣೆಗೆ ತೆರಳಿ ಸತೀಶ್​ ದೂರು ನೀಡುತ್ತಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಊಟದ ತಟ್ಟೆ ಟೇಬಲ್ ಮೇಲೆ ಹಾಗೆಯೇ ಇತ್ತು.. ವಿಮಾನ ದುರಂತದ ಕರಾಳತೆ

Air India Filght Crash: ಸಹ ಪೈಲಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಸಾವು

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments