Webdunia - Bharat's app for daily news and videos

Install App

ಮದ್ಯ ಮಾರಾಟದ ಅವಧಿ: ಅಂದು ವಿರೋಧಿಸಿದ್ದ ಮೋಟಮ್ಮ ಇಂದು ಯಾಕೆ ಮೌನ: ರೇಣುಕಾಚಾರ್ಯ

Webdunia
ಬುಧವಾರ, 3 ಆಗಸ್ಟ್ 2016 (13:02 IST)
ನಾವು ಅಬಕಾರಿ ಖಾತೆ ಸಚಿವನಾಗಿದ್ದ ಸಮಯದಲ್ಲಿ ಮದ್ಯದ ಅಂಗಡಿ ಸಮಯ ವಿಸ್ತರಣೆ ಮಾಡಲು ಕಾಂಗ್ರೆಸ್ ನಾಯಕಿ ಮೋಟಮ್ಮ ವಿರೋಧಿಸಿದ್ದರು. ಆದರೆ, ಈಗ ಅವರೇಕೆ ಮೌನವಾಗಿದ್ದಾರೆ ಎಂದು ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಸಚಿವರಾದ ಎಚ್‌.ವೈ.ಮೇಟಿ ಅವರು ರಾಜಧಾನಿ ಬೆಂಗಳೂರಿನಲ್ಲಿ ಮದ್ಯದ ಅಂಗಡಿ ಸಮಯವನ್ನು ರಾತ್ರಿ ಒಂದು ಗಂಟೆಯವರೆಗೂ ವಿಸ್ತರಣೆ ಮಾಡಿದ್ದಾರೆ. ಆದರೆ, ನಾವು ಅಬಕಾರಿ ಖಾತೆ ಸಚಿವನಾಗಿದ್ದ ಸಮಯದಲ್ಲಿ ಮದ್ಯದ ಅಂಗಡಿ ಸಮಯ ವಿಸ್ತರಣೆ ಮಾಡಲು ಕಾಂಗ್ರೆಸ್ ನಾಯಕಿ ಮೋಟಮ್ಮ ವಿರೋಧಿಸಿದ್ದರು. ಈಗ ಮೋಟಮ್ಮ ಏಕೆ ಮೌನವಾಗಿದ್ದಾರೆ ಎಂದು ತಿಳಿಸಿದರು.
 
ಅಬಕಾರಿ ಸಚಿವರ ಎಚ್‌.ವೈ.ಮೇಟಿ ಅವರು ಗ್ರಾಮೀಣ ಭಾಗದ ಜನರು ಅಶಿಕ್ಷಿತರು, ಅವರು ಕುಡಿದು ತೂರಾಡುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಅವರು ಗ್ರಾಮೀಣ ಭಾಗದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
 
 
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ....
 
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್‌ಗೂ ನನಗೂ ಸಂಬಂಧವಿಲ್ಲ. ಆತ ಯಾರೆಂದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
 
ನನ್ನ ಮನೆಯಲ್ಲಿ ಹಾಗೂ ನನ್ನ ಸಂಬಂಧಿಗಳಲ್ಲಿ ಯಾರು ಪಿಯುಸಿ ವಿಧ್ಯಾರ್ಥಿಗಳಿಲ್ಲ. ಪ್ರಕರಣ ಕುರಿತು ಸಿಐಡಿ ತನಿಖೆಯಾಗಲಿ. ನನ್ನ ಹೆಸರು ಕೆಡಿಸಲು ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ. 
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್

Operation Sindoor: ಸೇನೆಗೆ ಭಗವಂತ ಶಕ್ತಿ ತುಂಬಲು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

Operation Sindoor: ಮತ್ತೆ ಬಾಲ ಬಿಚ್ಚಿದ ಪಾಪಿಸ್ತಾನ: ಪ್ರತಿದಾಳಿಗೆ ಸೇನೆಗೆ ಪರಮಾಧಿಕಾರ ನೀಡಿದ ಪಾಕ್‌ ಪ್ರಧಾನಿ

Operation Sindoor: 18 ವಿಮಾನಗಳು ಬಂದ್, 200 ವಿಮಾನಗಳು ರದ್ದು: ವಿಮಾನ ಪ್ರಯಾಣಿಕರು ಈ ಸೂಚನೆ ಗಮನಿಸಿ

ಸಿಂಧೂರರಾಮಯ್ಯನಾದ ಸಿದ್ದರಾಮಯ್ಯ: ಸಿಎಂ ವರಸೆ ಬಗ್ಗೆ ಪ್ರತಾಪ ಸಿಂಹ ಟೀಕೆ

ಮುಂದಿನ ಸುದ್ದಿ
Show comments