Select Your Language

Notifications

webdunia
webdunia
webdunia
webdunia

ನನ್ನನ್ನು ಕೇಳಲು ಅವನಾರು?: ಮಾಜಿ ಸಂಸದ ವಿಶ್ವನಾಥ್ ವಿರುದ್ಧ ವಿ.ಶ್ರೀನಿವಾಸ್ ಪ್ರಸಾದ್ ಗುಡುಗು

ನನ್ನನ್ನು ಕೇಳಲು ಅವನಾರು?: ಮಾಜಿ ಸಂಸದ ವಿಶ್ವನಾಥ್ ವಿರುದ್ಧ ವಿ.ಶ್ರೀನಿವಾಸ್ ಪ್ರಸಾದ್ ಗುಡುಗು
ಬೆಂಗಳೂರು , ಮಂಗಳವಾರ, 1 ಮಾರ್ಚ್ 2016 (16:34 IST)
ಮಾಜಿ ಸಂಸದ ಎಚ್‌.ವಿಶ್ವನಾಥ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ನನ್ನನ್ನು ಕೇಳಲು ಅವನಾರು? ಅವನಿಗೆ ಅಧಿಕಾರ ಕೊಟ್ಟವರಾರು? ಎಂದು ಗುಡುಗಿದ್ದಾರೆ.
 
ಕಂದಾಯ ಸಚಿವನಾದ ನಾನು ಎಲ್ಲಿಗೆ ಹೋಗ್ತೇನೆ. ಏನು ಮಾಡ್ತೇನೆ ಎನ್ನುವ ವಿವರವನ್ನು ಮಾಜಿ ಸಂಸದ ವಿಶ್ವನಾಥ್‌ರಿಗೆ ಯಾಕೆ ನೀಡಬೇಕು ಎಂದು ಗುಡುಗಿದರು.
 
ವಿಶ್ವನಾಥ್ ಮಾಧ್ಯಮ ಪ್ರಿಯರಾಗಿದ್ದರಿಂದ ಮಾಧ್ಯಮಗಳಲ್ಲಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಹೇಳಿಕೆ ನೀಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.
 

Share this Story:

Follow Webdunia kannada