Webdunia - Bharat's app for daily news and videos

Install App

'ರಾಜ್ ಲೀಲಾ ವಿನೋದ'ದಲ್ಲಿ ಅಂತದ್ದೇನಿದೆ?

Webdunia
ಸೋಮವಾರ, 26 ಡಿಸೆಂಬರ್ 2016 (16:47 IST)
ಹಿರಿಯ ನಟಿ ಲೀಲಾವತಿ ಅವರ ಆತ್ಮಕಥೆ 'ರಾಜ್ ಲೀಲಾ ವಿನೋದ' ನಿನ್ನೆ ಬಿಡುಗಡೆಯಾಗಲಿಲ್ಲ. ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಈ ಪುಸ್ತಕ ಬಿಡುಗಡೆಯಾಗದಿರುವುದು ಸಾಕಷ್ಟು ಜನರಲ್ಲಿ ನಿರಾಸೆ ಮೂಡಿಸಿದೆ. ಆದರೆ, ಸೋಮವಾರದಿಂದ ಪುಸ್ತಕ ಮಳಿಗೆಗಳಲ್ಲಿ ಈ ಬಹು ನಿರೀಕ್ಷಿತ ಪುಸ್ತಕ ಕೈಗೆಟುಕಲಿದೆ.
ಪುಸ್ತಕದಲ್ಲಿ ನಟಿ ಲೀಲಾವತಿ ತಾವು ಬಣ್ಣದ ಹುಚ್ಚು ಅಂಟಿಸಿಕೊಂಡಿದ್ದು, ನಾಟಕ ಕಂಪನಿಗಳಲ್ಲಿನ ತಮ್ಮ ಪಯಣ,  ರಾಜ್ ಜೊತೆಗಿನ ಪ್ರೇಮಕಥನ, ಬದುಕಿನುದ್ದಕ್ಕೂ ಎದುರಿಸಿದ ಕಷ್ಟ, ಹೋರಾಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
 
ಪುಸ್ತಕದ ಮುಖಪುಟದಲ್ಲಿ ನಟ ರಾಜಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ್ ರಾಜ್ ಇರುವ ಪೋಟೋವನ್ನು ಬಳಸಲಾಗಿದ್ದು, ಶೀರ್ಷಿಕೆ ಅಡಿಯಲ್ಲಿ ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಎಂದು ಬರೆಯಲಾಗಿದೆ. ಶೀರ್ಷಿಕೆ ಮತ್ತು ಮುಖಪುಟ ಜತೆಗೆ ರವಿ ಬೆಳಗೆರೆ ಪುಸ್ತಕವನ್ನು ಬರೆದಿರುವುದು "ರಾಜ್ ಲೀಲಾ ವಿನೋದ"ದ ಮೇಲೆ ಕುತೂಹಲ ಹೆಚ್ಚಲು ಕಾರಣವಾಗಿದೆ.  
 
ಲೀಲಾವತಿ ಹಾಗೂ ಡಾ.ರಾಜ್ ನಡುವಿನ ಸಂಬಂಧದ ಬಗ್ಗೆ ಹಲವು ದಶಕಗಳಿಂದ ಇದ್ದ ಸಹಜ ಕುತೂಹಲಕ್ಕೆ ಈ ಪುಸ್ತಕ ಉತ್ತರ ನೀಡಬಹುದು ಎಂಬ ನಿರೀಕ್ಷೆ ಓದುಗರದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments