Webdunia - Bharat's app for daily news and videos

Install App

ಚಿರತೆಯೊಂದು ವಿಬ್‌ಗಯಾರ್ ಶಾಲೆಯನ್ನು ಪ್ರವೇಶಿಸಿದಾಗ ಏನಾಯ್ತು ಗೊತ್ತಾ? ವಿಡಿಯೋ ವೀಕ್ಷಿಸಿ

Webdunia
ಸೋಮವಾರ, 8 ಫೆಬ್ರವರಿ 2016 (15:56 IST)
ನಗರದ ವರ್ತೂರ್ ಬಳಿಯಿರುವ ಖಾಸಗಿ ಶಾಲೆಯೊಂದರಲ್ಲಿ ಚಿರತೆಯೊಂದು ನುಗ್ಗಿ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರನ್ನು ಕಚ್ಚಿಗಾಯಗೊಳಿಸಿದ ಘಟನೆ ವರದಿಯಾಗಿದೆ.  
 
ಆರಂಭದಲ್ಲಿ ವಿಬ್‌ಗಯಾರ್ ಶಾಲೆಯ ಸಿಸಿಟಿವಿಯಲ್ಲಿ ಬೆಳಗಿನ ಜಾವ 4.30 ರ ಸುಮಾರಿಗೆ ಚಿರತೆ ಶಾಲೆಯನ್ನು ಪ್ರವೇಶಿಸುತ್ತಿರುವ ದೃಶ್ಯ ಸೆರೆಯಾಗಿದೆ. ಅದೃಷ್ಟವಶಾತ್ ಅಂದರೆ ರವಿವಾರವಾಗಿದ್ದರಿಂದ ಶಾಲೆಯನ್ನು ಮುಚ್ಚಲಾಗಿತ್ತು. 
 
ಶಾಲಾ ಅಡಳಿತ ಮಂಡಳಿ ಕೂಡಲೇ ಅರಣ್ಯಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಗಲು ಹೊತ್ತಿನಲ್ಲಿ ಶಾಲೆಯಿಂದ ಪರಾರಿಯಾಗಿದ್ದ ಚಿರತೆ, ಹತ್ತಿರವಿರುವ ಪೊದೆಗಳಲ್ಲಿ ಅಡಗಿಕೊಂಡಿತ್ತು ಎನ್ನಲಾಗಿದೆ.
 
ಅರಣ್ಯಾಧಿಕಾರಿಗಳು ಪ್ರಜ್ಞೆ ತಪ್ಪಿಸುವ ಗುಂಡಿನ ದಾಳಿ ನಡೆಸಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಡಿದ ಚಿರತೆಯನ್ನು ಬನ್ನೇರುಘಟ್ಟ ಬಯಾಲಾಜಿಕಲ್ ಪಾರ್ಕ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ವಿಡಿಯೋ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments