Webdunia - Bharat's app for daily news and videos

Install App

ಕಾಲೇಜು ವಿದ್ಯಾರ್ಥಿಗಳಿಗೆ ಆಕೆ ಮಾರಾಟ ಮಾಡಿದ್ದೇನು?

Webdunia
ಸೋಮವಾರ, 27 ಆಗಸ್ಟ್ 2018 (19:57 IST)
ಮನೆಯಲ್ಲಿ ತುಳಸಿ ಗಿಡ ಇಟ್ಟಕೊಂಡು ಕಾಲೇಜು ವಿದ್ಯಾರ್ಥಿಗಳನ್ನ ದೇವರ ದರ್ಶನದ ಹೆಸರಿನಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮಾಡ್ತಿದ್ದ ನಟೋರಿಯಸ್ ಆಂಟಿಯ ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ.

ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆಯಲ್ಲಿ ರೇಣುಕಾ ಜಲ್ದೆ ಎಂಬ ಮಹಿಳೆ ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಎರಿಸುವ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಮನೆಯ ಅಂಗಳದಲ್ಲಿ ತುಳಸಿ ಗಿಡದ ಪಕ್ಕದಲ್ಲೆ ಪೋದೆಯೊಂದರಲ್ಲಿ ಭೂಮಿ ಅಗೆದು ಒಳಗೆ ಡ್ರಗ್ಸ್ ಇಟ್ಟು ದರ್ಶನದ ನೆಪ ಮಾಡಿ ಬರುವ ಯುವಕರಿಗೆ ಮಾರಾಟ ಮಾಡ್ತಿದ್ದಳು.

ಈ ದಂಧೆ ಮೇಲ್ಮೋಟಕ್ಕೆ ಸಾಮಾನ್ಯವಾಗಿ ಕಂಡು ಬಂದರು ಇಷ್ಟೊಂದು ಜನ ಯಾಕೆ ಈ ಮನೆಯತ್ತ ಹೋಗ್ತಿದ್ದಾರೆ ಅಂತ ಅನುಮಾನ ಬಂದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಕಾಶ್, ಡ್ರಗ್ಸ್ ಕಂಟ್ರೋಲ್ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅಧಿಕಾರಿಗಳ ತಂಡ ಮಹಿಳೆ ಮನೆ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದ ಮತ್ತೆರಿಸುವ ಮಾತ್ರೆಗಳು ಪತ್ತೆಯಾಗಿವೆ. ರೇಣುಕಾ ಜಲ್ದೆ ಅವಳನ್ನು ಬಂಧಿಸಿರುವ ಪೊಲೀಸರು ಪರಾರಿಯಾದ ಆಕೆಯ ಗಂಡ ಸಂಜೀವಕುಮಾರ್ ಜಲ್ದೆ ಪತ್ತೆಗಾಗಿ ಜಾಲ ಬೀಸಿದ್ದಾರೆ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

E20 ಇಂಧನವು ವಾಹನಗಳನ್ನು ಹಾಳುಮಾಡುತ್ತಿದೆ: ರಾಹುಲ್ ಗಾಂಧಿ

ಶೀಘ್ರದಲ್ಲೇ ಮೊಜ್ಬಾಬಾ ಖಮೇನಿ ಮರಣದ ಸುದ್ದಿ ಕೇಳಿಬಂದರೆ ಆಶ್ಚರ್ಯವಿಲ್ಲ: ಇಸ್ರೇಲ್‌

ದಬಾಯಿಸಿ, ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ: ಛಲವಾದಿ ನಾರಾಯಣಸ್ವಾಮಿ, Video

ವೈದ್ಯರ ಮೇಲಿನ ಹಲ್ಲೆ ಪ್ರಕರಣ: ಶಿವಸೇನೆ ಕಾರ್ಪೊರೇಟರ್ ರಮೇಶ್ ಮ್ಹಾತ್ರೆಗೆ ಬಿಗ್ ರಿಲೀಫ್‌

ಗೂಂಡಾಗಿರಿ ತೋರಿಸಿ ಬಸವರಾಜ ಹೊರಟ್ಟಿ ಅವರಿಂದ ರಾಜೀನಾಮೆ ಕೊಡಿಸಲಾಗಿದೆ

ಮುಂದಿನ ಸುದ್ದಿ