Webdunia - Bharat's app for daily news and videos

Install App

ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿತರಕ್ಷಣಾ ವೇದಿಕೆ ಒತ್ತಾಯ

Webdunia
ಭಾನುವಾರ, 13 ಫೆಬ್ರವರಿ 2022 (21:18 IST)
ಮಡಿಕೇರಿಯ ವಾರ್ಡ್ ನಂಬರ್ 20ರ  ಚಾಮುಂಡೇಶ್ವರಿ ನಗರದ ಹಾಲಿನ ಅಂಗಡಿಯ ಸಮೀಪದ ರಸ್ತೆಯ ಬದಿಯಲ್ಲಿ ಕೆಲವು ಹೋಂಸ್ಟೇಗಳ  ಕಸಗಳನ್ನು ಬಿಯರ್ ಬಾಟಲಿ  ಕೆ. ಫ್. ಸಿ ಚಿಕನ್ ನ ಪ್ಯಾಕೆಟ್ ಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು  ತಂದು ಹಾಕುತ್ತಿರುವುದು ಕಂಡು ಬರುತ್ತಿದೆ  ನಗರಸಭೆಯಿಂದ ಇಲ್ಲಿ ಕಸ ಹಾಕಬಾರದು ಎಂದು ಫ್ಲಕ್ಸ್  ಅಳವಡಿಸಿದರು ತಮಗೇನು ಸಂಬಂಧವಿಲ್ಲದಂತೆ  ಅದರ ಬುಡದಲ್ಲೇ ತಂದು ಹಾಕುತ್ತಿರುವುದು ಕಂಡುಬರುತ್ತಿದೆ ಈ ಕಸದ ಬ್ಯಾಗ್ ಗಳನ್ನು ನಾಯಿಗಳು ಎಲ್ಲೆಂದರಲ್ಲಿ ಎಳೆದು ಕೊಂಡು  ರಸ್ತೆಯಲ್ಲೆಲ್ಲ  ಹರಡಿ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು  ತುಂಬಾ ತೊಂದರೆಯಾಗುತ್ತಿದೆ ಇದಕ್ಕೂ ಮೊದಲು ಇದೇ ಜಾಗದಲ್ಲಿ  ನಗರಸಭೆಯ ವತಿಯಿಂದ ಒಂದು  ತೊಟ್ಟಿ  ಇರಿಸಲಾಗಿತ್ತು ಈ ತೊಟ್ಟಿ ಯಲ್ಲಿ ಇದ್ದ ಕಸಗಳನ್ನೆಲ್ಲ  ಬೀದಿನಾಯಿಗಳು ರಸ್ತೆಯಲ್ಲಿ ಎಲ್ಲ ಹರಡುತ್ತಿದ್ದವು ಅದರಿಂದ ಹಿತರಕ್ಷಣಾ  ವೇದಿಕೆಯು  ಆಗಿನ ಪೌರಾಯುಕ್ತರು ಹಾಗೂ   ನಗರಸಭಾ  ಅಧ್ಯಕ್ಷರ ಗಮನಕ್ಕೆ ತಂದು  ಆ ತೊಟ್ಟಿಯನ್ನು  ಅಲ್ಲಿಂದ  ತೆರವು ಮಾಡಿಸಿ ವೇದಿಕೆ ವತಿಯಿಂದ ಕಸ  ಹಾಕದಂತೆ ನಾಮಫಲಕವನ್ನು ಅಳವಡಿಸಲಾಗಿತ್ತು  ಈಗ ಕೆಲವು ಹೋಂಸ್ಟೇ ಯವರು  ಇಲ್ಲಿ ಕಸ ಗಳನ್ನು  ತಂದು ಹಾಕುತ್ತಿರುವುದು  ಕಂಡುಬರುತ್ತಿದೆ  ಇಲ್ಲಿ ಕಸ ಹಾಕುವವರ ವಿರುದ್ದ  ನಗರಸಭೆ ಆದಷ್ಟು ಬೇಗ ಕ್ರಮ ತೆಗೆದುಕೊಂಡು ಎಲ್ಲೆಂದರಲ್ಲಿ ಕಸ ಹಾಕುವ ಹೋಂಸ್ಟೇಗಳ  ವಿರುದ್ಧ ಸೂಕ್ತ  ಕ್ರಮ ತೆಗೆದುಕೊಂಡು ಅವರುಗಳಿಗೆ ದಂಡ ವಿಧಿಸಿ ಅವರುಗಳ ಪರವಾನಗಿಯನ್ನು   ರದ್ದು ಮಾಡಬೇಕು ಹಾಗೂ ನಗರಸಭೆ ವತಿಯಿಂದ ಈ ಸ್ಥಳದಲ್ಲಿ  ಒಂದು ಸಿಸಿ ಕ್ಯಾಮರಾವನ್ನು ಅಳವಡಿಸಬೇಕಾಗಿದೆ  ಸ್ಥಳೀಯ ನಾಗರಿಕರು  ಹಾಗೂ  ಹಿತರಕ್ಷಣಾ ವೇದಿಕೆವತಿಯಿಂದ ಮನವಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments