Select Your Language

Notifications

webdunia
webdunia
webdunia
webdunia

ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ
ಚಾಮರಾಜನಗರ , ಸೋಮವಾರ, 4 ಮೇ 2015 (12:30 IST)
ಸಾಲಬಾಧೆ ತಾಳಲಾರದೆ ದಂಪತಿಗಳಿಬ್ಬರು ನೇಣಿಗೆ ಶರಣಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ನಗರದ ಅರಳೀಕಟ್ಟೆ ಬೀದಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದಂಪತಿಗಳನ್ನು ಮಾದಪ್ಪ(35) ಮತ್ತು ಆತನ ಪತ್ನಿ ನೀಲಮ್ಮ(26) ಎಂದು ತಿಳಿದು ಬಂದಿದೆ. ಮೃತರು ಡೆತ್ ನೋಟನ್ನು ಬರೆದಿಟ್ಟು ಸಾವನ್ನಪ್ಪಿದ್ದು, ಸಾವಿಗೆ ಕಾರಣವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡೆತ್ ನೋಟ್‌ನಲ್ಲೇನಿದೆ?
ನಾವು ನಡೆಸುತ್ತಿದ್ದ ಲಾಡ್ಜ್ ಇತ್ತೀಚೆಗೆ ನಷ್ಟದಲ್ಲಿ ಸಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 10 ಲಕ್ಷ ರೂ. ಗಳನ್ನು ಇತರೆ ವ್ಯಕ್ತಿಗಳಿಂದ ಸಾಲ ಮಾಡಿದ್ದೆ. ಆದರೆ ಆ ಸಾಲ ನೀಡಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ವಿವರಿಸಿದ್ದಾರೆ.  

ಇನ್ನು ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada